ಒಂಭತ್ತನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ
ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ೧೯೧ ನೇ ಜಯಂತ್ಯುತ್ಸವದ ನಿಮಿತ್ತವಾಗಿ ದಿನಾಂಕ:-29.03.2026 ರಿಂದ 03.04.2026 ರವರೆಗೆ ಹಮ್ಮಿಕೊಂಡ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ಪ್ರಶಸ್ತಿ ವಿತರಣಾ ಸಮಾರಂಭವು ದಿ: 03.04.2026 ರಂದು ಜರುಗಿತು. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲಾ, ಧಾರವಾಡ ಇವರು ಮಾತನಾಡುತ್ತಾ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಬಂದು ಶ್ರೀಗಳವರ ಈ ಪುಣ್ಯಭೂಮಿಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಎಲ್ಲರ ಪುಣ್ಯ, ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಬಹುಮಾನ ಪಡೆದಷ್ಟು ಸಂತೋಷವನ್ನು ವ್ಯಕ್ತಪಡಿಸಿದಂತೆ. ಶ್ರೀಮಠದ ಟ್ರಸ್ಟ್ ಕಮೀಟಿಯಿಂದ ಮಾಡುತ್ತಿರುವ ಈ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. ಭಜನೆ ಎಂಬುದು ಪರಮಾತ್ಮನನ್ನು ಒಲಿಸಿಕೊಳ್ಳುವುದು ಮತ್ತು ಶಾಂತಿ ನೆಮ್ಮದಿಯನ್ನು ಪಡೆಯುವುದಾಗಿದೆ. ನಮ್ಮ ಪೂರ್ವಜರು ಈ ಸಂಸ್ಕೃತಿಯನ್ನು ಮಾಡಿಕೊಂಡು ಬರುತ್ತಿದ್ದರು ಆದರೆ ಇಂದು ಈ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಲ್ಲರದ್ದು ಆಗಿದೆ ಅಂತಾ ತಮ್ಮ ಹಿತ ನುಡಿಗಳನ್ನು ನುಡಿದರು. ಹಾಗೂ ಸನ್ಮಾನ್ಯ ಶ್ರೀ ಡಿ.ಆರ್. ಪಾಟೀಲ, ಅಧ್ಯಕ್ಷರು ಭಕ್ತರ ಮೇಲ್ಮನೆ ಸಭಾ, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಹಾಗೂ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಇವರುಗಳು ಬಹುಮಾನ ವಿತರಣೆ ಮಾಡಿ ಮಾತನಾಡುತ್ತಾ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ನಡೆಯುತ್ತಿರುವ ಈ ಭಜನಾ ಸ್ಪರ್ಧೆಯು ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ನೆರವೇರುತ್ತಿರುವುದು ಶ್ರೀ ಸಿದ್ಧಾರೂಢರ ಪವಾಡ ಈ ಮೊದಲು ನಮ್ಮ ಹಳ್ಳಿಗಳಲ್ಲಿ ನಡೆಯುವ ಉತ್ಸವ, ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಜನೆಯನ್ನು ಮಾಡುವುದು ಸಂಪ್ರದಾಯವಾಗಿತ್ತು ಆದರೆ ಇಂದು ಅದ್ಯಾವುದು ಇಲ್ಲದಂತಾಗಿದೆ ಆದರೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಅನುಗ್ರಹದಿಂದ ಟ್ರಸ್ಟ್ ಕಮೀಟಿಯವರು ಇದನ್ನು ಪುನರುಜ್ಜೀವನಗೊಳಿಸುತ್ತಿರುವುದು ಶ್ಲಾಘನೀಯವಾಗಿದೆ ಅಂತಾ ನುಡಿದರು. ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಶ್ರೋ.ಬ್ರ. ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು, ದಾಸೋಹ ಮಠ ಅಣ್ಣಿಗೇರಿ ಇವರು ವಹಿಸಿದ್ದರು, ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಆತ್ಮಾನಂದ ಮಹಾಸ್ವಾಮಿಗಳು, ಗೋಕಾಕ ಇವರು ವಹಿಸಿದ್ದರು. ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿಗಳು ಆದ ಶ್ರೀ ಶಾಮಾನಂದ ಬಿ. ಪೂಜೇರಿ ಇವರು ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರುಗಳನ್ನು ಪ್ರಕಟಿಸಿದರು. ಪ್ರಥಮ ಬಹುಮಾನ ವಿಜೇತ ತಂಡಗಳು:- ಶ್ರೀ ನಿರುಪಾಧೀಶ್ವರ ಭಜನಾ ಮಂಡಳಿ, ಸಾ|| ಶಿವಾಪೂರ (ಕೆ), ತಾ||ಗೋಕಾಕ, ಜಿ||ಬೆಳಗಾವಿ. ಶ್ರೀ ಮರಿಯಮ್ಮ ಕರಿಯಮ್ಮ ಭಜನಾ ಮಂಡಳಿ, ಸಾ||ನೂಲ್ವಿ, ತಾ||ಹುಬ್ಬಳ್ಳಿ, ಜಿ||ಧಾರವಾಡ, ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಸಾ||ಗೋಕಾಕ ಫಾಲ್ಸ್, ತಾ||ಗೋಕಾಕ, ಜಿ||ಬೆಳಗಾವಿ. ಶ್ರೀ ಸಂಗಮೇಶ್ವರ ಭಜನಾ ಮಂಡಳಿ (ಬಾಲಕಿಯರು), ಸಾ||ಹಿಡಕಲ್ಲ, ತಾ||ರಾಯಬಾಗ, ಜಿ||ಬೆಳಗಾವಿ. ಶ್ರೀಮನ್ನಿಜಗುಣ ಶಿವಯೋಗಿ ತತ್ವಪದ ಮತ್ತು ಜಾನಪದ ತಂಡ, ಸಾ||ಬಳ್ಳಾರಿ, ದ್ವಿತೀಯ ಬಹುಮಾನ ವಿಜೇತ ತಂಡಗಳು :- ಶ್ರೀ ದಾನೇಶ್ವರಿ ಭಜನಾ ಮಂಡಳಿ (ಮಹಿಳಾ), ಹುಬ್ಬಳ್ಳಿ, ಜಿ||ಧಾರವಾಡ, ಶ್ರೀ ಭೀಮಾಶಂಕರ ಭಜನಾ ಮಂಡಳಿ, ಸಾ||ಹುಣಶ್ಯಾಳ ಪಿ.ಜಿ. ತಾ||ಮೂಡಲಗಿ, ಜಿ||ಬೆಳಗಾವಿ. ಶ್ರೀ ಸದ್ಗುರು ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಸಾ||ಶಿರಗಾಂವ, ತಾ||ಹುಕ್ಕೇರಿ, ಜಿ||ಬೆಳಗಾವಿ. ಶ್ರೀ ಪಂಚಸಿದ್ದೇಶ್ವರ ಭಜನಾ ತಂಡ, ಸಾ||ವಡ್ರಟ್ಟಿ ತಾ||ಮೂಡಲಗಿ, ಜಿ||ಬೆಳಗಾವಿ. ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಸಾ||ಹಿಡಕಲ್ಲ, ತಾ||ರಾಯಬಾಗ, ಜಿ||ಬೆಳಗಾವಿ. ತೃತೀಯ ಬಹುಮಾನ ವಿಜೇತರಾದ:- ಶ್ರೀ ನಿತ್ಯಾನಂದ ಭಜನಾ ಮಂಡಳಿ, ಸಾ||ಮೆಳ್ಳಿಗೇರಿ, ತಾ||ಮುಧೋಳ, ಜಿ||ಬಾಗಲಕೋಟ, ಶ್ರೀ ರಾಚೋಟೇಶ್ವರ ಭಜನಾ ಮಂಡಳಿ, ಸಾ||ಕಣಬೂರ, ತಾ||ಬಬಲೇಶ್ವರ, ಜಿ||ವಿಜಯಪುರ, ಶ್ರೀ ಮುರಘೇಂದ್ರ ಶಿವಯೋಗಿ ಭಜನಾ ಮಂಡಳಿ, ಸಾ||ಅಥಣಿ, ಜಿ||ಬೆಳಗಾವಿ. ಶ್ರೀ ಬಸವೇಶ್ವರ ಭಜನಾ ತಂಡ, ಸಾ||ಹೊಸಳ್ಳಿ, ತಾ||ರಾಮದುರ್ಗ, ಜಿ||ಬೆಳಗಾವಿ, ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಸಾ||ಬೂದಿಹಾಳ ಎಚ್.ಬಿ. ತಾ||ಬೀಳಗಿ, ಜಿ||ಬಾಗಲಕೋಟ, ಸಮಾಧಾನಕರ ಬಹುಮಾನ ವಿಜೇತ ತಂಡಗಳು :- ಶ್ರೀ ಬಸವೇಶ್ವರ ಭಜನಾ ಮಂಡಳಿ, ಸಾ||ಹಡವನಹಳ್ಳಿ, ತಾ||ತುರವಿಕೆರೆ, ಜಿ||ತುಮಕೂರ, ಶ್ರೀ ಶಿವಾನಂದ ಭಜನಾ ಮಂಡಳಿ (ಬಾಲಕಿಯರ), ಸಾ||ತಾವರಗೇರಿ, ತಾ||ಕಲಘಟಗಿ, ಜಿ||ಧಾರವಾಡ, ಶ್ರೀ ಏಕಲವ್ಯ ಭಜನಾ ಸಂಘ, ಸಾ||ತಡಕಲ್ಲ, ತಾ||ಮಾನ್ವಿ, ಜಿ||ರಾಯಚೂರ, ಶ್ರೀ ಗುರುಬಸವೇಶ್ವರ ಭಜನಾ ಮಂಡಳಿ, ಸಾ||ಬೀರೂರ, ತಾ||ಕಡೂರ, ಜಿ||ಚಿಕ್ಕಮಗಳೂರು, ಶ್ರೀ ಕಾಲಬೈರೇಶ್ವರ ಸ್ವಾಮಿ ಭಜನಾ ತಂಡ, ಸಾ||ಹಳೇಬೀಡು, ತಾ||ಬೇಲೂರು, ಜಿ||ಹಾಸನ, ಶ್ರೀ ಆಂಜನೇಯ ಭಜನಾ ಕಲಾ ಸಂಘ, ಸಾ||ಸಂಗಮೇಶ್ವರ, ತಾ||ಕೊಟ್ಟೂರು, ಜಿ||ವಿಜಯನಗರ, ಶ್ರೀ ಚನ್ನಕೇಶವಸ್ವಾಮಿ ಕಲಾ ಟ್ರಸ್ಟ್, ಸಾ||ಚಿಕ್ಕಬಳ್ಳಾಪೂರ, ಶ್ರೀ ಗುರುಮಲ್ಲೇಶ್ವರ ಭಜನಾ ಮಂಡಳಿ, ಸಾ||ಆಯರಹಳ್ಳಿ, ತಾ||ಜಿ||ಮೈಸೂರು, ಶ್ರೀ ರಾಷ್ಟೊçÃತ್ಥಾನ ವಾರೀದಿ ಭಜನಾ ತಂಡ, ಸಾ||ದಾವಣಗೆರೆ, ಶ್ರೀ ನರಹರಿ ಭಜನಾ ಮಂಡಳಿ, ಸಾ||ಕುರುಬರಹಳ್ಳಿ, ತಾ||ಜಿ||ಚಿತ್ರದುರ್ಗ, ಶ್ರೀ ಮಲ್ಲೇಶ್ವರ ಭಜನಾ ಮಂಡಳಿ, ಸಾ||ಮಾಳವಳ್ಳಿ, ತಾ||ಶಿಕಾರಿಪುರ,, ಜಿ||ಶಿವಮೊಗ್ಗ, ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮಿ ಭಜನಾ ತಂಡ, ಸಾ||ರಂಗAಪೇಟೆ, ತಾ||ಸುರಪುರ, ಜಿ||ಯಾದಗೀರ, ಶ್ರೀ ಶಿವಲಿಂಗೇಶ್ವರ ಭಜನಾ ಮಂಡಳಿ, ಸಾ||ಹಿರೇಆಲಗುಂದಿ, ತಾ||ಮುಧೋಳ, ಜಿ||ಬಾಗಲಕೋಟ, ಮಹಿಳಾ ಪುರಸ್ಕಾರ:- ಶ್ರೀ ಕನಕಾಂಬ ಭಜನಾ ಮಂಡಳಿ, ಸಾ||ಕಳವೆ, ಶಿರಸಿ, ಜಿ||ಉತ್ತರ ಕನ್ನಡ, ಬಾಲಕ/ಬಾಲಕಿಯರ ಪುರಸ್ಕಾರ:- ಶ್ರೀ ಸದ್ಗುರು ಸಂಗೀತ ವಿದ್ಯಾಲಯ, ವಿದ್ಯಾನಗರ, ಹುಬ್ಬಳ್ಳಿ, ಶ್ರೀ ಸಿದ್ಧಾರೂಢ ಮಹಿಳಾ ಭಜನಾ ತಂಡ, ಸಾ||ಗೋಕಾಕ, ಜಿ||ಬೆಳಗಾವಿ. ಉತ್ತಮ ಗಾಯಕ ಪುರಸ್ಕಾರ:- ಶ್ರೀ ದಾದೇಸಾಬ್ ಸೈಯದ್ಅಲಿ, ಶ್ರೀ ಸಿದ್ದರಾಮೇಶ್ವರ ಭಜನಾ ಮಂಡಳಿ, ಸಾ||ಬೂದಿಹಾಳ ಎಸ್.ಜಿ. ಶ್ರೀಮತಿ ಅಬಾಯವ್ವ ಹಡಪದ, ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಸಾ||ಕೊಣ್ಣೂರ, ತಾ||ಜಮಖಂಡಿ, ಉತ್ತಮ ಹರ್ಮೋನಿಯಂ ಪುರಸ್ಕಾರ:- ಶ್ರೀ ಗೋವಿಂದ ಗೋವಿ, ಮಾಸ್ತರ, ಶ್ರೀ ರಾಮಾವಧೂತ ಭಜನಾ ಮಂಡಳಿ, ಸಾ||ಚಿಕ್ಕಲಕಿ, ತಾ||ಜಮಖಂಡಿ, ಶ್ರೀ ಶೇಖರಯ್ಯ ಕುಂದರಗಿಮಠ, ಶ್ರೀ ಚನ್ನಬಸವೇಶ್ವರ ಭಜನಾ ಮಂಡಳಿ, ಸಾ||ಮುಗಳೊಳ್ಳಿ, ತಾ||ಜಿ||ಬಾಗಲಕೋಟ, ಉತ್ತಮ ತಬಲಾ ಪುರಸ್ಕಾರ:- ಉತ್ತಮ ದಮಡಿ ಪುರಸ್ಕಾರ:- ಶ್ರೀ ಚೌಕಪ್ಪ ಹಾದಿಮನಿ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಸಾ||ರಂಜಣಗಿ, ತಾ||ಮುಧೋಳ, ಶ್ರೀ ಕರಿಯಪ್ಪ ಗಣಿ, ಶ್ರೀ ಶಿವಪುತ್ರ ಅವಧೂತ ಭಜನಾ ಮಂಡಳಿ, ಸಾ||ಲಿಂಗನೂರ, ತಾ||ಜಮಖಂಡಿ, ಶ್ರೀ ಸಂಗಮೇಶ್ವರ ಭಜನಾ ಮಂಡಳಿ, ಸಾ||ಚಿಕ್ಕಾಲಗುಂಡಿ, ಶ್ರೀ ರಂಗಪ್ಪ ಸಿ. ಹುನಕುಂಟಿ, ತಾ||ಬೀಳಗಿ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಸಾ||ಬೈರಮಟ್ಟಿ, ಜಿ||ಬಾಗಲಕೋಟ, ಉತ್ತಮ ತಾಳ ಪುರಸ್ಕಾರ:- ಶ್ರೀ ಮುತ್ತಪ್ಪ ಯಂಕAಚಿ, ಶ್ರೀ ಚನ್ನವೃಷಭೇಂದ್ರ ಭಜನಾ ಮಂಡಳಿ, ಸಾ||ಹಾರೂಗೇರಿ, ತಾ||ರಾಯಬಾಗ, ಶ್ರೀ ಕರಿಯಪ್ಪ ಮೇಲಿನಮನಿ, ಶ್ರೀ ಕುಮಾರೇಶ್ವರ ಭಜನಾ ಮಂಡಳಿ, ಸಾ||ಬಿದರಿ, ತಾ||ಜಮಖಂಡಿ, ಉತ್ತಮ ಡಗ್ಗಾ ಪುರಸ್ಕಾರ:- ಶ್ರೀ ಗದಿಗೆಪ್ಪ ಚ. ಹುಬ್ಬಳ್ಳಿ, ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಸಾ||ಕುರವಿನಕೊಪ್ಪ, ತಾ||ಕಲಘಟಗಿ, ಜಿ||ಧಾರವಾಡ, ಶ್ರೀ ದುರ್ಗಾಂಬ ಭಜನಾ ಮಂಡಳಿ, ಸಾ||ಹರಳಗುಪ್ಪೆ, ತಾ||ತಿಪಟೂರ ಈ ರೀತಿಯಾಗಿ ಬಹುಮಾನವನ್ನು ಪಡೆದಿರುತ್ತಾರೆ.
ವೇದಿಕೆ ಮೇಲೆ ಚೇರ್ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ, ವೈಸ್-ಚೇರ್ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಉದಯಕುಮಾರ ಡಿ. ನಾಯಕ ಹಾಗೂ ಶ್ರೀಮಠದ ಮ್ಯಾನೇಜರ್ ಈರಣ್ಣ ಎಸ್. ತುಪ್ಪದ ಉಪಸ್ಥಿತರಿದ್ದರು. ಶ್ರೀಮಠದ ಧರ್ಮದರ್ಶಿಗಳು ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ ಅಧ್ಯಕ್ಷರಾದ ಶಾಮಾನಂದ ಬಾ ಪೂಜೇರಿ ಇವರು ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು