ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ
ಜಗದಾದಿ ಜಗದ್ಗುರು, ಸಾಧು ಸಾಮ್ರಾಟರೆಂದೇ ಲೋಕಮಾನ್ಯರಾದ ಸದ್ಗುರುಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಪರಿವರ್ತಿಸಿದರು, ಕೈಲಾಸವನ್ನು ಧರೆಗಿಳಿಸಿ ಕೈಲಾಸ ಮಂಟಪವನ್ನು ಕಿಟಕಿ ಬಾಗಿಲುಗಳಿಲ್ಲದೆ ನಿರ್ಮಿಸಿ ಸಮಸ್ತ ಭಕ್ತರಿಗೆ ಜಾತಿ, ಮತ, ಪಂಥವೆನ್ನದೆ ಸಕಲ ಭಕ್ತರಿಗೆ ಮುಕ್ತವಿರಿಸಿದ್ದಾರೆೆ, ಮಾನವ ಕುಲಕೋಟಿಯ ಆರಾಧ್ಯ ದೈವವಾಗಿದ್ದಾರೆ, ಮುಕ್ತಿ ಪ್ರದಾಯಕರಾಗಿದ್ಧಾರೆ.
ದಿನಾಂಕ:-17.02.2026 ರಂದು ಸಂಜೆ 06-15 ಗಂಟೆಗೆ ನೆರವೇರಿತು. ಈ ಕಾರ್ಯಕ್ರಮದ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಶಾಂತಾಶ್ರಮ, ಹುಬ್ಬಳ್ಳಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ ಟೆಂಗಿನಕಾಯಿ, ಶಾಸಕರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಶ್ರೀ ಶ್ರೀಗಂಧ ಶೇಟ್, ಅಧ್ಯಕ್ಷರು ಕೆ.ಜಿ.ಪಿ.ಫೌಂಡೇಶನ್ ಹಾಗೂ ಮಾಲೀಕರು ಕೆ.ಜಿ.ಪಿ. ಗ್ರುಫ್ ಆಫ್ ಕಂಪನೀಸ್, ಇವರುಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಸಿ.ಎ. ಶ್ರೀ ಚನ್ನವೀರ ಮುಂಗುರವಾಡಿ ಇವರು ವಹಿಸಿದ್ದರು. ನಿರೂಪಣೆಯನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ನೆರವೇರಿಸಿದರು. ಹಾಗೂ ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀಮಠದ ಮ್ಯಾನೇಜರರಾದ ಶ್ರೀ ಈರಣ್ಣ ಸೋ. ತುಪ್ಪದ, ಹಾಗೂ ಸಿಬ್ಬಂದಿವರ್ಗದವರು ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು