Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಬಾದ್ಮಿ ಅಮವಾಸ್ಯೆ
16-05-2026

Daily News
ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ

ದಿನಾಂಕ:16.05.2026 ರ ಶನಿವಾರ ದಂದು ಸಂಜೆ 06-15 ಗಂಟೆಗೆ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಹಾಗೂ ಮೌನಯೋಗಿ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ ಮಠದ ಆವರಣದಲ್ಲಿ ಇರುವ ಪುಷ್ಕರಣಿಯಲ್ಲಿ “ಆರೂಢ ಆರತಿ” ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮದ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ದಾಸೋಹ ಮಠ, ಅಣ್ಣಿಗೇರಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ನಾಗರಾಜ ಗೌರಿ, ರಾಜಕೀಯ ಮುಖಂಡರು ಹಾಗೂ ಶ್ರೀಮತಿ ಅರ್ಚನಾ ರುದ್ರೇಶ ಘಾಳಿ, ಮಾನ್ಯ ಆಯುಕ್ತರಾದ ಶ್ರೀ ರುದ್ರೇಶ ಘಾಳಿಯವರ ಧರ್ಮಪತ್ನಿ. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು. ಹಿರಿಯ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಸರ್ವರನ್ನು ಸ್ವಾಗತಿಸಿದರು. ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಮತ್ತು ಸಿಬ್ಬಂದಿವರ್ಗದವರು ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ವತಿಯಿಂದ ವಾಣಿಜ್ಯ ಸಂಕಿರ್ಣ ಕಟ್ಟಡದ ಅಡಿಗಲ್ಲು ಸಮಾರಂಭ.

ಶಿವಾವತಾರಿ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಸ್ಟೇಷನ್ ರಸ್ತೆಯಲ್ಲಿರುವ (ಜ್ಯೂಯಲುಕಾಸ್ ಗೋಲ್ಡ್ ಶೋ ರೂಮ್ ಎದುರಿಗೆ) ಶ್ರೀಮಠದ ಜಾಗೆಯಲ್ಲಿ ವಾಣಿಜ್ಯ ಸಂಕಿರ್ಣ ಕಟ್ಟಡದ ಅಡಿಗಲ್ಲು ಸಮಾರಂಭವು ದಿನಾಂಕ:-೧೫-೦೫-೨೦೨೬ ರಂದು ಸಾಯಂಕಾಲ:-೦೪-೦೦ ಘಂಟೆಗೆ ನೆರವೇರಿಸಲಾಯಿತು. ಉದ್ಘಾಟಕರಾಗಿ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು, ಹಾಗೂ ಧಾರವಾಡ ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ ಇವರು ನೆರವೇರಿಸಿದರು, ದಿವ್ಯಸನ್ನಿದಾನವನ್ನು ಶ್ರೋ.ಬ್ರ.ಸದ್ಗುರು ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ, ವಂದನಾರ್ಪಣೆಯನ್ನು ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರುಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಿ.ಡಿ.ಕಾಮರಡ್ಡಿ ಉಪಸ್ಥಿತರಿದ್ದರು.

ಸನ್ಮಾನ್ಯ ಶ್ರೀಮತಿ ಬಿ.ಎಸ್. ಭಾರತಿ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ ಜಿಲ್ಲಾ ಧಾರವಾಡ ಇವರ ಅಭಿನಂದನಾ ಸಮಾರಂಭ

ಶಿವಾವತಾರಿ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ ಜಿಲ್ಲಾ ಧಾರವಾಡ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ:-೧೫-೦೫-೨೦೨೬ ರಂದು ಸಾಯಂಕಾಲ:-೦೭-೦೦ ಘಂಟೆಗೆ ನೆರವೇರಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಶ್ರೀಮಠದ ಸೇವೆ ಸಲ್ಲಿಸಲಿಕ್ಕೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ, ಸಿದ್ಧಾರೂಢರನ್ನು ನೆನೆದರೆ ಸಾಕು ನಮ್ಮ ಕಷ್ಟಗಳು ಕ್ಷಣಾರ್ದದಲ್ಲಿ ನಿವಾರಣೆಯಾಗುತ್ತವೆ, ಶ್ರೀಮಠದಿಂದ ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ಸೌಕರ್ಯಗಳನ್ನು ಟ್ರಸ್ಟ್ ಕಮೀಟಿಯು ಮಾಡಿಕೊಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ತಮ್ಮ ಹಿತ ನುಡಿಗಳನ್ನು ನುಡಿದರು. ಕಾರ್ಯಕ್ರಮದ ದಿವ್ಯಸನ್ನಿದಾನವನ್ನು ಶ್ರೋ.ಬ್ರ.ಸದ್ಗುರು ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಧರ್ಮದರ್ಶಿಗಳಾದ ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ ಹಿತ ನುಡಿಗಳನ್ನು ನುಡಿದರು. ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ನೆರವೇರಿಸಿದರು, ಪ್ರಾರ್ಥನೆಯನ್ನು ಶ್ರೀ ಸದಾನಂದ ಬೆಂಡಿಗೇರಿ ನೆರವೇರಿಸಿದರು, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ವಿ.ಡಿ.ಕಾಮರಡ್ಡಿ ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಿಂದ ಸನ್ಮಾನ್ಯ ಶ್ರೀ ಸತೀಶ ಲ. ಜಾರಕಿಹೊಳಿ ಇವರ ಭೆಟ್ಟಿ.

ದಿನಾಂಕ:-26.04.2026 ರಂದು ಸನ್ಮಾನ್ಯ ಶ್ರೀ ಸತೀಶ ಲ. ಜಾರಕಿಹೊಳಿ, ಮಾನ್ಯ ಸಚಿವರು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು, ಬೆಳಗಾವಿ ಇವರು ಶ್ರೀಮಠದಕ್ಕೆ ಭೇಟಿ ಕೊಟ್ಟು ಉಭಯ ಶ್ರೀಗಳವರ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮಠದ ಚೇರ್‌ಮನ್ನರಾಗಿ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಉದಯಕುಮಾರ ಡಿ. ನಾಯಕ ಹಾಗೂ ಶ್ರೀಮಠದ ಸಿಬ್ಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ದಿನೇಶ ಗುಂಡೂರಾವ್ ಇವರ ಭೆಟ್ಟಿ.

ದಿನಾಂಕ:-26.04.2026 ರಂದು ಸನ್ಮಾನ್ಯ ಶ್ರೀ ದಿನೇಶ ಗುಂಡೂರಾವ್, ಆರೋಗ್ಯ ಸಚಿವರು, ಕರ್ನಾಟಕ ಸರ್ಕಾರ ಇವರು ಶ್ರೀಮಠದಕ್ಕೆ ಭೇಟಿ ಕೊಟ್ಟು ಉಭಯ ಶ್ರೀಗಳವರ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ|| ಸತೀಶ ಹೊನಿಕೇರಿ, ಶ್ರೀ ಮೋಹನ ಹೆಗಡೆ, ಸಿ.ಇ.ಓ. ಸಂಯುಕ್ತ ಕರ್ನಾಟಕ ದಿನಪತ್ರಿಕೆ ಹಾಗೂ ಶ್ರೀಮಠದ ಸಿಬ್ಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು.

ಒಂಭತ್ತನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ೧೯೧ ನೇ ಜಯಂತ್ಯುತ್ಸವದ ನಿಮಿತ್ತವಾಗಿ ದಿನಾಂಕ:-29.03.2026 ರಿಂದ 03.04.2026 ರವರೆಗೆ ಹಮ್ಮಿಕೊಂಡ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ಪ್ರಶಸ್ತಿ ವಿತರಣಾ ಸಮಾರಂಭವು ದಿ: 03.04.2026 ರಂದು ಜರುಗಿತು. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ ಜಿಲ್ಲಾ, ಧಾರವಾಡ ಇವರು ಮಾತನಾಡುತ್ತಾ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಬಂದು ಶ್ರೀಗಳವರ ಈ ಪುಣ್ಯಭೂಮಿಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಎಲ್ಲರ ಪುಣ್ಯ, ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಬಹುಮಾನ ಪಡೆದಷ್ಟು ಸಂತೋಷವನ್ನು ವ್ಯಕ್ತಪಡಿಸಿದಂತೆ. ಶ್ರೀಮಠದ ಟ್ರಸ್ಟ್ ಕಮೀಟಿಯಿಂದ ಮಾಡುತ್ತಿರುವ ಈ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. ಭಜನೆ ಎಂಬುದು ಪರಮಾತ್ಮನನ್ನು ಒಲಿಸಿಕೊಳ್ಳುವುದು ಮತ್ತು ಶಾಂತಿ ನೆಮ್ಮದಿಯನ್ನು ಪಡೆಯುವುದಾಗಿದೆ. ನಮ್ಮ ಪೂರ್ವಜರು ಈ ಸಂಸ್ಕೃತಿಯನ್ನು ಮಾಡಿಕೊಂಡು ಬರುತ್ತಿದ್ದರು ಆದರೆ ಇಂದು ಈ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಲ್ಲರದ್ದು ಆಗಿದೆ ಅಂತಾ ತಮ್ಮ ಹಿತ ನುಡಿಗಳನ್ನು ನುಡಿದರು. ಹಾಗೂ ಸನ್ಮಾನ್ಯ ಶ್ರೀ ಡಿ.ಆರ್. ಪಾಟೀಲ, ಅಧ್ಯಕ್ಷರು ಭಕ್ತರ ಮೇಲ್ಮನೆ ಸಭಾ, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಹಾಗೂ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಇವರುಗಳು ಬಹುಮಾನ ವಿತರಣೆ ಮಾಡಿ ಮಾತನಾಡುತ್ತಾ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ನಡೆಯುತ್ತಿರುವ ಈ ಭಜನಾ ಸ್ಪರ್ಧೆಯು ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ನೆರವೇರುತ್ತಿರುವುದು ಶ್ರೀ ಸಿದ್ಧಾರೂಢರ ಪವಾಡ ಈ ಮೊದಲು ನಮ್ಮ ಹಳ್ಳಿಗಳಲ್ಲಿ ನಡೆಯುವ ಉತ್ಸವ, ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಜನೆಯನ್ನು ಮಾಡುವುದು ಸಂಪ್ರದಾಯವಾಗಿತ್ತು ಆದರೆ ಇಂದು ಅದ್ಯಾವುದು ಇಲ್ಲದಂತಾಗಿದೆ ಆದರೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಅನುಗ್ರಹದಿಂದ ಟ್ರಸ್ಟ್ ಕಮೀಟಿಯವರು ಇದನ್ನು ಪುನರುಜ್ಜೀವನಗೊಳಿಸುತ್ತಿರುವುದು ಶ್ಲಾಘನೀಯವಾಗಿದೆ ಅಂತಾ ನುಡಿದರು. ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಶ್ರೋ.ಬ್ರ. ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು, ದಾಸೋಹ ಮಠ ಅಣ್ಣಿಗೇರಿ ಇವರು ವಹಿಸಿದ್ದರು, ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಆತ್ಮಾನಂದ ಮಹಾಸ್ವಾಮಿಗಳು, ಗೋಕಾಕ ಇವರು ವಹಿಸಿದ್ದರು. ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿಗಳು ಆದ ಶ್ರೀ ಶಾಮಾನಂದ ಬಿ. ಪೂಜೇರಿ ಇವರು ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರುಗಳನ್ನು ಪ್ರಕಟಿಸಿದರು. ಪ್ರಥಮ ಬಹುಮಾನ ವಿಜೇತ ತಂಡಗಳು:- ಶ್ರೀ ನಿರುಪಾಧೀಶ್ವರ ಭಜನಾ ಮಂಡಳಿ, ಸಾ|| ಶಿವಾಪೂರ (ಕೆ), ತಾ||ಗೋಕಾಕ, ಜಿ||ಬೆಳಗಾವಿ. ಶ್ರೀ ಮರಿಯಮ್ಮ ಕರಿಯಮ್ಮ ಭಜನಾ ಮಂಡಳಿ, ಸಾ||ನೂಲ್ವಿ, ತಾ||ಹುಬ್ಬಳ್ಳಿ, ಜಿ||ಧಾರವಾಡ, ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಸಾ||ಗೋಕಾಕ ಫಾಲ್ಸ್, ತಾ||ಗೋಕಾಕ, ಜಿ||ಬೆಳಗಾವಿ. ಶ್ರೀ ಸಂಗಮೇಶ್ವರ ಭಜನಾ ಮಂಡಳಿ (ಬಾಲಕಿಯರು), ಸಾ||ಹಿಡಕಲ್ಲ, ತಾ||ರಾಯಬಾಗ, ಜಿ||ಬೆಳಗಾವಿ. ಶ್ರೀಮನ್ನಿಜಗುಣ ಶಿವಯೋಗಿ ತತ್ವಪದ ಮತ್ತು ಜಾನಪದ ತಂಡ, ಸಾ||ಬಳ್ಳಾರಿ, ದ್ವಿತೀಯ ಬಹುಮಾನ ವಿಜೇತ ತಂಡಗಳು :- ಶ್ರೀ ದಾನೇಶ್ವರಿ ಭಜನಾ ಮಂಡಳಿ (ಮಹಿಳಾ), ಹುಬ್ಬಳ್ಳಿ, ಜಿ||ಧಾರವಾಡ, ಶ್ರೀ ಭೀಮಾಶಂಕರ ಭಜನಾ ಮಂಡಳಿ, ಸಾ||ಹುಣಶ್ಯಾಳ ಪಿ.ಜಿ. ತಾ||ಮೂಡಲಗಿ, ಜಿ||ಬೆಳಗಾವಿ. ಶ್ರೀ ಸದ್ಗುರು ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಸಾ||ಶಿರಗಾಂವ, ತಾ||ಹುಕ್ಕೇರಿ, ಜಿ||ಬೆಳಗಾವಿ. ಶ್ರೀ ಪಂಚಸಿದ್ದೇಶ್ವರ ಭಜನಾ ತಂಡ, ಸಾ||ವಡ್ರಟ್ಟಿ ತಾ||ಮೂಡಲಗಿ, ಜಿ||ಬೆಳಗಾವಿ. ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಸಾ||ಹಿಡಕಲ್ಲ, ತಾ||ರಾಯಬಾಗ, ಜಿ||ಬೆಳಗಾವಿ. ತೃತೀಯ ಬಹುಮಾನ ವಿಜೇತರಾದ:- ಶ್ರೀ ನಿತ್ಯಾನಂದ ಭಜನಾ ಮಂಡಳಿ, ಸಾ||ಮೆಳ್ಳಿಗೇರಿ, ತಾ||ಮುಧೋಳ, ಜಿ||ಬಾಗಲಕೋಟ, ಶ್ರೀ ರಾಚೋಟೇಶ್ವರ ಭಜನಾ ಮಂಡಳಿ, ಸಾ||ಕಣಬೂರ, ತಾ||ಬಬಲೇಶ್ವರ, ಜಿ||ವಿಜಯಪುರ, ಶ್ರೀ ಮುರಘೇಂದ್ರ ಶಿವಯೋಗಿ ಭಜನಾ ಮಂಡಳಿ, ಸಾ||ಅಥಣಿ, ಜಿ||ಬೆಳಗಾವಿ. ಶ್ರೀ ಬಸವೇಶ್ವರ ಭಜನಾ ತಂಡ, ಸಾ||ಹೊಸಳ್ಳಿ, ತಾ||ರಾಮದುರ್ಗ, ಜಿ||ಬೆಳಗಾವಿ, ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಸಾ||ಬೂದಿಹಾಳ ಎಚ್.ಬಿ. ತಾ||ಬೀಳಗಿ, ಜಿ||ಬಾಗಲಕೋಟ, ಸಮಾಧಾನಕರ ಬಹುಮಾನ ವಿಜೇತ ತಂಡಗಳು :- ಶ್ರೀ ಬಸವೇಶ್ವರ ಭಜನಾ ಮಂಡಳಿ, ಸಾ||ಹಡವನಹಳ್ಳಿ, ತಾ||ತುರವಿಕೆರೆ, ಜಿ||ತುಮಕೂರ, ಶ್ರೀ ಶಿವಾನಂದ ಭಜನಾ ಮಂಡಳಿ (ಬಾಲಕಿಯರ), ಸಾ||ತಾವರಗೇರಿ, ತಾ||ಕಲಘಟಗಿ, ಜಿ||ಧಾರವಾಡ, ಶ್ರೀ ಏಕಲವ್ಯ ಭಜನಾ ಸಂಘ, ಸಾ||ತಡಕಲ್ಲ, ತಾ||ಮಾನ್ವಿ, ಜಿ||ರಾಯಚೂರ, ಶ್ರೀ ಗುರುಬಸವೇಶ್ವರ ಭಜನಾ ಮಂಡಳಿ, ಸಾ||ಬೀರೂರ, ತಾ||ಕಡೂರ, ಜಿ||ಚಿಕ್ಕಮಗಳೂರು, ಶ್ರೀ ಕಾಲಬೈರೇಶ್ವರ ಸ್ವಾಮಿ ಭಜನಾ ತಂಡ, ಸಾ||ಹಳೇಬೀಡು, ತಾ||ಬೇಲೂರು, ಜಿ||ಹಾಸನ, ಶ್ರೀ ಆಂಜನೇಯ ಭಜನಾ ಕಲಾ ಸಂಘ, ಸಾ||ಸಂಗಮೇಶ್ವರ, ತಾ||ಕೊಟ್ಟೂರು, ಜಿ||ವಿಜಯನಗರ, ಶ್ರೀ ಚನ್ನಕೇಶವಸ್ವಾಮಿ ಕಲಾ ಟ್ರಸ್ಟ್, ಸಾ||ಚಿಕ್ಕಬಳ್ಳಾಪೂರ, ಶ್ರೀ ಗುರುಮಲ್ಲೇಶ್ವರ ಭಜನಾ ಮಂಡಳಿ, ಸಾ||ಆಯರಹಳ್ಳಿ, ತಾ||ಜಿ||ಮೈಸೂರು, ಶ್ರೀ ರಾಷ್ಟೊçÃತ್ಥಾನ ವಾರೀದಿ ಭಜನಾ ತಂಡ, ಸಾ||ದಾವಣಗೆರೆ, ಶ್ರೀ ನರಹರಿ ಭಜನಾ ಮಂಡಳಿ, ಸಾ||ಕುರುಬರಹಳ್ಳಿ, ತಾ||ಜಿ||ಚಿತ್ರದುರ್ಗ, ಶ್ರೀ ಮಲ್ಲೇಶ್ವರ ಭಜನಾ ಮಂಡಳಿ, ಸಾ||ಮಾಳವಳ್ಳಿ, ತಾ||ಶಿಕಾರಿಪುರ,, ಜಿ||ಶಿವಮೊಗ್ಗ, ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮಿ ಭಜನಾ ತಂಡ, ಸಾ||ರಂಗAಪೇಟೆ, ತಾ||ಸುರಪುರ, ಜಿ||ಯಾದಗೀರ, ಶ್ರೀ ಶಿವಲಿಂಗೇಶ್ವರ ಭಜನಾ ಮಂಡಳಿ, ಸಾ||ಹಿರೇಆಲಗುಂದಿ, ತಾ||ಮುಧೋಳ, ಜಿ||ಬಾಗಲಕೋಟ, ಮಹಿಳಾ ಪುರಸ್ಕಾರ:- ಶ್ರೀ ಕನಕಾಂಬ ಭಜನಾ ಮಂಡಳಿ, ಸಾ||ಕಳವೆ, ಶಿರಸಿ, ಜಿ||ಉತ್ತರ ಕನ್ನಡ, ಬಾಲಕ/ಬಾಲಕಿಯರ ಪುರಸ್ಕಾರ:- ಶ್ರೀ ಸದ್ಗುರು ಸಂಗೀತ ವಿದ್ಯಾಲಯ, ವಿದ್ಯಾನಗರ, ಹುಬ್ಬಳ್ಳಿ, ಶ್ರೀ ಸಿದ್ಧಾರೂಢ ಮಹಿಳಾ ಭಜನಾ ತಂಡ, ಸಾ||ಗೋಕಾಕ, ಜಿ||ಬೆಳಗಾವಿ. ಉತ್ತಮ ಗಾಯಕ ಪುರಸ್ಕಾರ:- ಶ್ರೀ ದಾದೇಸಾಬ್ ಸೈಯದ್‌ಅಲಿ, ಶ್ರೀ ಸಿದ್ದರಾಮೇಶ್ವರ ಭಜನಾ ಮಂಡಳಿ, ಸಾ||ಬೂದಿಹಾಳ ಎಸ್.ಜಿ. ಶ್ರೀಮತಿ ಅಬಾಯವ್ವ ಹಡಪದ, ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಸಾ||ಕೊಣ್ಣೂರ, ತಾ||ಜಮಖಂಡಿ, ಉತ್ತಮ ಹರ‍್ಮೋನಿಯಂ ಪುರಸ್ಕಾರ:- ಶ್ರೀ ಗೋವಿಂದ ಗೋವಿ, ಮಾಸ್ತರ, ಶ್ರೀ ರಾಮಾವಧೂತ ಭಜನಾ ಮಂಡಳಿ, ಸಾ||ಚಿಕ್ಕಲಕಿ, ತಾ||ಜಮಖಂಡಿ, ಶ್ರೀ ಶೇಖರಯ್ಯ ಕುಂದರಗಿಮಠ, ಶ್ರೀ ಚನ್ನಬಸವೇಶ್ವರ ಭಜನಾ ಮಂಡಳಿ, ಸಾ||ಮುಗಳೊಳ್ಳಿ, ತಾ||ಜಿ||ಬಾಗಲಕೋಟ, ಉತ್ತಮ ತಬಲಾ ಪುರಸ್ಕಾರ:- ಉತ್ತಮ ದಮಡಿ ಪುರಸ್ಕಾರ:- ಶ್ರೀ ಚೌಕಪ್ಪ ಹಾದಿಮನಿ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಸಾ||ರಂಜಣಗಿ, ತಾ||ಮುಧೋಳ, ಶ್ರೀ ಕರಿಯಪ್ಪ ಗಣಿ, ಶ್ರೀ ಶಿವಪುತ್ರ ಅವಧೂತ ಭಜನಾ ಮಂಡಳಿ, ಸಾ||ಲಿಂಗನೂರ, ತಾ||ಜಮಖಂಡಿ, ಶ್ರೀ ಸಂಗಮೇಶ್ವರ ಭಜನಾ ಮಂಡಳಿ, ಸಾ||ಚಿಕ್ಕಾಲಗುಂಡಿ, ಶ್ರೀ ರಂಗಪ್ಪ ಸಿ. ಹುನಕುಂಟಿ, ತಾ||ಬೀಳಗಿ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಸಾ||ಬೈರಮಟ್ಟಿ, ಜಿ||ಬಾಗಲಕೋಟ, ಉತ್ತಮ ತಾಳ ಪುರಸ್ಕಾರ:- ಶ್ರೀ ಮುತ್ತಪ್ಪ ಯಂಕAಚಿ, ಶ್ರೀ ಚನ್ನವೃಷಭೇಂದ್ರ ಭಜನಾ ಮಂಡಳಿ, ಸಾ||ಹಾರೂಗೇರಿ, ತಾ||ರಾಯಬಾಗ, ಶ್ರೀ ಕರಿಯಪ್ಪ ಮೇಲಿನಮನಿ, ಶ್ರೀ ಕುಮಾರೇಶ್ವರ ಭಜನಾ ಮಂಡಳಿ, ಸಾ||ಬಿದರಿ, ತಾ||ಜಮಖಂಡಿ, ಉತ್ತಮ ಡಗ್ಗಾ ಪುರಸ್ಕಾರ:- ಶ್ರೀ ಗದಿಗೆಪ್ಪ ಚ. ಹುಬ್ಬಳ್ಳಿ, ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಸಾ||ಕುರವಿನಕೊಪ್ಪ, ತಾ||ಕಲಘಟಗಿ, ಜಿ||ಧಾರವಾಡ, ಶ್ರೀ ದುರ್ಗಾಂಬ ಭಜನಾ ಮಂಡಳಿ, ಸಾ||ಹರಳಗುಪ್ಪೆ, ತಾ||ತಿಪಟೂರ ಈ ರೀತಿಯಾಗಿ ಬಹುಮಾನವನ್ನು ಪಡೆದಿರುತ್ತಾರೆ. ವೇದಿಕೆ ಮೇಲೆ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ, ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಉದಯಕುಮಾರ ಡಿ. ನಾಯಕ ಹಾಗೂ ಶ್ರೀಮಠದ ಮ್ಯಾನೇಜರ್ ಈರಣ್ಣ ಎಸ್. ತುಪ್ಪದ ಉಪಸ್ಥಿತರಿದ್ದರು. ಶ್ರೀಮಠದ ಧರ್ಮದರ್ಶಿಗಳು ಹಾಗೂ ರಾಜ್ಯಮಟ್ಟದ ಭಜನಾ ಸ್ಪರ್ಧೆ ಅಧ್ಯಕ್ಷರಾದ ಶಾಮಾನಂದ ಬಾ ಪೂಜೇರಿ ಇವರು ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 31.03.2026 ರಂದು ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆಯನ್ನು ಧರ್ಮದರ್ಶಿಗಳಾದ ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ ಇವರು ವಹಿಸಿಕೊಂಡು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚೇರ್‌ಮನ್ನರಾಗಿ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ಆಯ್ಕೆಯಾದರು, ವೈಸ್ ಚೇರ್‌ಮನ್ನರಾಗಿ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ಆಯ್ಕೆಯಾದರು, ಗೌರವ ಕಾರ್ಯದರ್ಶಿಗಳಾಗಿ ವಿನಾಯಕ ಅ. ಘೋಡ್ಕೆ ಇವರು ಆಯ್ಕೆಯಾದರು, ಇವರುಗಳನ್ನು ದಿನಾಂಕ:-31.03.2026 ರಿಂದ 01.04.2027 ರ ಅವಧಿಗಾಗಿ ಆಯ್ಕೆ ಮಾಡಲಾಯಿತು, ಆಯ್ಕೆ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವೀರಪ್ಪ ವೀ. ಮಲ್ಲಾಪೂರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ವ್ಹಿ.ಡಿ.ಕಾಮರಡ್ಡಿ, ಶ್ರೀ ವಸಂತ ವಾಯ್. ಸಾಲಗಟ್ಟಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಅನಿರುದ್ಧ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-24.03.2026 ರಂದು ಕನ್ನಡ ಚಲನ ಚಿತ್ರ ನಟರಾದ ಸನ್ಮಾನ್ಯ ಶ್ರೀ ಅನಿರುದ್ಧ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಮ್ಯಾನೇಜರ್‌ರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.




  VIEW ALL