Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಯುಗಾದಿ ಅಮವಾಸ್ಯೆ
18-03-2026, ಯುಗಾದಿ ಅಮವಾಸ್ಯೆ
ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
Date:-27.03.2026 ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
ಯುಗಾದಿ ಪ್ರತಿಪದ, ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ ಆರಂಭ
19.03.2026, ಯುಗಾದಿ ಪ್ರತಿಪದ, ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ ಆರಂಭ

Daily News
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಅನಿರುದ್ಧ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-24.03.2026 ರಂದು ಕನ್ನಡ ಚಲನ ಚಿತ್ರ ನಟರಾದ ಸನ್ಮಾನ್ಯ ಶ್ರೀ ಅನಿರುದ್ಧ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಮ್ಯಾನೇಜರ್‌ರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀಮತಿ ಲಾವಣ್ಯ ಬಲ್ಲಾಳ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-22.03.2026 ರಂದು ಕಾಂಗ್ರೇಸ್ ಮುಖಂಡರಾದ ಸನ್ಮಾನ್ಯ ಶ್ರೀಮತಿ ಲಾವಣ್ಯ ಬಲ್ಲಾಳ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಮಾಜಿ ಚೇರ್‌ಮನ್ನರಾದ ಶ್ರೀ ಮಹೇಂದ್ರ ಎಚ್. ಸಿಂಘಿ, ಮ್ಯಾನೇಜರ್‌ರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ

ದಿನಾಂಕ:-18.03.2026 ರಂದು ಸಂಜೆ 06-15 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಶಾಂತಾಶ್ರಮ, ಹುಬ್ಬಳ್ಳಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ವಿಜಯಕುಮಾರ ಶೆಟ್ಟರ ಉದ್ಯಮಿಗಳು ಹುಬ್ಬಳ್ಳಿ ಹಾಗೂ ಶ್ರೀ ರಮೇಶ ಬಾಫಣಾ, ಉದ್ಯಮಿಗಳು, ಹುಬ್ಬಳ್ಳಿ ಇವರುಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಸಿ.ಎ. ಶ್ರೀ ಚನ್ನವೀರ ಮುಂಗುರವಾಡಿ ಇವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಟ್ರಸ್ಟ ಕಮೀಟಿಯ ಧರ್ಮದರ್ಶಿಗಳಾದ ಶ್ರಿ ಉದಯಕುಮಾರ ಡಿ. ನಾಯ್ಕ ಇವರು ನೆರವೇರಿಸಿದರು. ಕಾರ್ಯಕ್ರಮ ಸ್ವಾಗತ & ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಕಲಬುರ್ಗಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಮಂಜುನಾಥ ಮುನವಳ್ಳಿ, ಶ್ರೀ ಬಾಳು ಟಿ. ಮಗಜಿಕೊಂಡಿ ಇವರುಗಳು ಉಪಸ್ಥಿತರಿದ್ದರು. ಭಕ್ತಾದಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು

ಲೆಕ್ಕಪರಿಶೋಧಕ (CA) ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಸಮೃದ್ಧಿ ಸಿ. ಮುಂಗುರವಾಡಿ ಇವರಿಗೆ ಸನ್ಮಾನ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಲೆಕ್ಕಪರಿಶೋಧಕ (CA) ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಸಮೃದ್ಧಿ ಚನ್ನವೀರ ಮುಂಗುರವಾಡಿ ಇವರಿಗೆ ಶ್ರೀಮಠದವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಅವರ ವೃತ್ತಿಯಲ್ಲಿ ಇನ್ನು ಹೆಚ್ಚಿನ ಸಾಧನೆಗೈಯಲಿಕ್ಕೆ ಉಭಯಶ್ರೀಗಳವರ ಕೃಪಾರ್ಶೀರ್ವಾದ ಸದಾ ಇರಲೆಂದು ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ ಚನ್ನವೀರ ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಅಂದಾನಪ್ಪ ಚಾಕಲಬ್ಬಿ, ಶ್ರೀ ಶಾಮಾನಂದ ಬಿ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ವಸಂತ ಸಾಲಗಟ್ಟಿ, ಶ್ರೀ ಮಂಜುನಾಥ ಮುನವಳ್ಳಿ, ಶ್ರೀಮತಿ ಗೀತಾ ಕಲಬುರ್ಗಿ ಹಾಗೂ ಶ್ರೀ ಮಠದ ಮ್ಯಾನೇಜರ್ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು

2026 ನೇ ಸಾಲಿನ ಶಿವರಾತ್ರಿ ಜಾತ್ರೆ ಮಹೋತ್ಸವ....

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ 2026 ನೇ ಸಾಲಿನ ಶಿವರಾತ್ರಿ ಜಾತ್ರೆ ಮಹೋತ್ಸವ....

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ

ಜಗದಾದಿ ಜಗದ್ಗುರು, ಸಾಧು ಸಾಮ್ರಾಟರೆಂದೇ ಲೋಕಮಾನ್ಯರಾದ ಸದ್ಗುರುಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿಯನ್ನು ಪುಣ್ಯ ಭೂಮಿಯನ್ನಾಗಿ ಪರಿವರ್ತಿಸಿದರು, ಕೈಲಾಸವನ್ನು ಧರೆಗಿಳಿಸಿ ಕೈಲಾಸ ಮಂಟಪವನ್ನು ಕಿಟಕಿ ಬಾಗಿಲುಗಳಿಲ್ಲದೆ ನಿರ್ಮಿಸಿ ಸಮಸ್ತ ಭಕ್ತರಿಗೆ ಜಾತಿ, ಮತ, ಪಂಥವೆನ್ನದೆ ಸಕಲ ಭಕ್ತರಿಗೆ ಮುಕ್ತವಿರಿಸಿದ್ದಾರೆೆ, ಮಾನವ ಕುಲಕೋಟಿಯ ಆರಾಧ್ಯ ದೈವವಾಗಿದ್ದಾರೆ, ಮುಕ್ತಿ ಪ್ರದಾಯಕರಾಗಿದ್ಧಾರೆ. ದಿನಾಂಕ:-17.02.2026 ರಂದು ಸಂಜೆ 06-15 ಗಂಟೆಗೆ ನೆರವೇರಿತು. ಈ ಕಾರ್ಯಕ್ರಮದ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಶಾಂತಾಶ್ರಮ, ಹುಬ್ಬಳ್ಳಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ ಟೆಂಗಿನಕಾಯಿ, ಶಾಸಕರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಶ್ರೀ ಶ್ರೀಗಂಧ ಶೇಟ್, ಅಧ್ಯಕ್ಷರು ಕೆ.ಜಿ.ಪಿ.ಫೌಂಡೇಶನ್ ಹಾಗೂ ಮಾಲೀಕರು ಕೆ.ಜಿ.ಪಿ. ಗ್ರುಫ್ ಆಫ್ ಕಂಪನೀಸ್, ಇವರುಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಸಿ.ಎ. ಶ್ರೀ ಚನ್ನವೀರ ಮುಂಗುರವಾಡಿ ಇವರು ವಹಿಸಿದ್ದರು. ನಿರೂಪಣೆಯನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ನೆರವೇರಿಸಿದರು. ಹಾಗೂ ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀಮಠದ ಮ್ಯಾನೇಜರರಾದ ಶ್ರೀ ಈರಣ್ಣ ಸೋ. ತುಪ್ಪದ, ಹಾಗೂ ಸಿಬ್ಬಂದಿವರ್ಗದವರು ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು

3ನೇ ದಿನದ ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ & ಮಹಾತ್ಮರಿಂದ ಪ್ರವಚನ

ಮಧ್ಯರಾತ್ರಿ ಮಲಗಿದವರನ್ನು ಬಡಿದೆಬ್ಬಿಸಿದ ಸಿತಾರ ಫ್ಯೂಸನ್ ಮೋಹಕ ಕಥಕ್ ನೃತ್ಯಕ್ಕೆ ನೋಡುಗರು ದಿಲ್‌ಖುಷ್ ಹುಬ್ಬಳ್ಳಿ: ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಗುರುವಾರ ರಾತ್ರಿ ಪಂಡಿತ ಮೋಹನರಾವ್ ಕಲ್ಯಾಣಪುರ ಕಥಕ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಮೋಹಕ ಕಥಕ್ ನೃತ್ಯವು ನೋಡುಗರಿಗೆ ಬಹಳ ಖುಷಿ ನೀಡಿತು. ಧೀರಜ್ ಗಜಬಿ ನಿರ್ದೇಶನದಲ್ಲಿ ಡಾ.ಅಪೂರ್ವ ಮತ್ತವರ ತಂಡದವರು ಪ್ರದರ್ಶಿಸಿದ ಲಯಬದ್ಧ ನೃತ್ಯವು ತನ್ನ ಹಾವ ಭಾವ ಬಳುಕುಗಳಿಂದ ಸಭಿಕರಲ್ಲಿ ಉತ್ಸಾಹ ತುಂಬಿತಲ್ಲದೇ ತಾಳಕ್ಕೆ ಚಪ್ಪಾಳೆ ತಟ್ಟುವಂತೆ ಮಾಡಿತು. ಮುಂಬೈನ ಪಂಡಿತ ಸೂರ ಶರ್ಮಾ ತಮ್ಮ ಶುದ್ಧ ಸ್ವರದಲ್ಲಿ ರಾಗ ದರ್ಬಾರಿಯಲ್ಲಿ ಶಿವೋಹಂ ಶಿವೋಹಂ, ದುರ್ಗಾದಲ್ಲಿ ಮಾತಾ ಭವಾನಿ ಕೊನೆಗೆ ತರಾನಾ ಮೂಲಕ ಹಾಡುಗಾರಿಕೆಗೆ ಅಜ್ಜ ಪಂಡಿತ ಜಸರಾಜ್‌ರಂತೆ ಆಧ್ಯಾತ್ಮಕ ಟಚ್ ಕೊಟ್ಟರು. ಸರಗಮ್ ಮತ್ತು ತಿಹಾಯಿ ಅಲ್ಲದೇ ತಾನ್‌ಗಳು ಸೂರ್ ಹಾಡುಗಾರಿಕೆಯಲ್ಲಿ ವಿಶಿಷ್ಟವಾಗಿದ್ದವು. ಇನ್ನೇನು ಮಧ್ಯರಾತ್ರಿ ಕಳೆದು ಭಕ್ತರು ನಿದ್ದೆ ಹೋಗುವ ಹಂತದಲ್ಲಿದ್ದಾಗ ಯುವ ಪ್ರತಿಭೆ ನಿಖಿಲ ಜೋಶಿ ಅವರ ಸಿತಾರ ಫ್ಯೂಸ್ ವಾದನ ಇಡೀ ಮಠದ ಆವರಣ ತುಂಬಿ ಮಲಗಿದವರನ್ನು ಎದ್ದು ಕುಳ್ಳಿರಿಸಿತು. ಸಿತಾರ್ ಹಾಡುತ್ತಿದೆಯೇನೋ ಎಂಬAತೆ ಅವರು ನುಡಿಸಿ ಮೆಚ್ಚುಗೆ ಗಳಿಸಿದರು. ರೇಖಾ ಹೆಗಡೆ, ಸದಾಶಿವ ಐಹೊಳೆ, ಸುಜಾತಾ ಗುರವ, ಅನ್ನಪೂರ್ಣ ಭಾಂಡಗೆ, ಶೋಭಾ ಜಾಬಿನ, ಸುರಭಿ ಸುರೇಶ ಭಕ್ತಿಗೀತೆಗಳನ್ನು, ಅಗಡಿಯ ಲಕ್ಷö್ಮವ್ವ ಮಾಗಡಿ ಸಂಗಡಿಗರು ಜಾನಪದ ಗೀತೆ ಹಾಡಿದರು. ಆರೋಹಿ ಐಹೊಳೆ ಕಥಕ್ ನೃತ್ಯ ಪ್ರದರ್ಶಿಸಿದರು. ಮನಸ್ಸಿನ ಪಾಪ ನಿವಾರಣೆಗೆ ಪಂಚಾಕ್ಷರಿ ಮಂತ್ರ ಮದ್ದು ಹುಬ್ಬಳ್ಳಿ: ಶರೀರದಿಂದ ಮತ್ತು ವಾಣಿಯಿಂದ ನಡೆದ ಪಾಪಗಳು ಹೊರಗೆ ಕಾಣುತ್ತವೆ. ಆದರೆ ಮನಸ್ಸಿನಲ್ಲಿಯೆ ಮಾಡಿದ ಪಾಪಗಳು ಕಾಣದೇ ಮನುಷ್ಯನನ್ನು ಕರ್ಮದ ಜಂಜಡಕ್ಕೆ ಸಿಲುಕಿಸುತ್ತವೆ. ಸಿದ್ಧಾರೂಢರು ಉಪದೇಶಿಸಿದ ಓಂ ನಮ: ಶಿವಾಯ ಪಂಚಾಕ್ಷರಿ ಜಪದಿಂದ ಅದನ್ನು ನಿವಾರಣೆ ಮಾಡಬಹುದು ಎಂದು ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಸಿದ್ಧಾರೂಢ ಮಠದ ಕೈಲಾಸ ಮಂಟಪದಲ್ಲಿ ಮುಂಜಾನೆ ಆವಬಲವಿಡಿದಖಳ ದುರಿತವೆನಸಗಿ ಜೀವಿಸುವೆ ಎಂಬ ವಿಷಯ ಕುರಿತು ನಡೆದ ವೇದಾಂತ ಪ್ರವಚನದಲ್ಲಿ ಮಾತನಾಡಿದ ಅವರು ಮಾಡುವುದನ್ನೆಲ್ಲ ಮಾಡಿ ವೇದಾಂತ ಕೇಳಿದರೇನು ಪ್ರಯೋಜನ ಎಂದರು. ಮೂರೂ ಹಂತದ ಪಾಪ ಕಳೆಯಲು ಒಳಗಿನ ಕಣ್ಣು ತೆರೆಯಬೇಕು. ಆಗ ವಿವೇಕ ಉದಯಿಸುವುದು ಇದಕ್ಕೆ ಈಶ್ವರನ ಕೃಪೆ ಗಳಿಸಬೇಕು. ಆಗ ಗುರುಕೃಪೆಯೂ ಆಗಿ ಮಾರ್ಗದರ್ಶನ ಸಿಗುವುದು. ಅಂತಃಕರಣ ಕರಗುವುದು ಎಂದರು. ಬದುಕಿನಲ್ಲಿ ನೀತಿಯುಕ್ತ ನಡವಳಿಕೆ ಅಗತ್ಯ. ಸತ್ಕಾರ್ಯಗಳನ್ನು ಮಾಡುತ್ತಲೇ ಇರಬೇಕು. ಆಗ ಪಾಪವು ಕಳೆದು ಭಗವಂತನ ಅನುಗ್ರಹ ಸಿಗುವುದು ಎಂದು ನಾಗೇಶ್ವರ ಸ್ವಾಮೀಜಿ ಹೇಳಿದರು. ಡಾ.ಶಿವಕುಮಾರ, ವಿದ್ಯಾನಂದ, ಬಸವರಾಜ, ಸಿದ್ಧ ಶಿವಯೋಗಿ, ಬಸವಾನಂದ, ಶಾಂತಾನAದ, ಕುಮಾರ, ಸಿದ್ಧಾನಂದ ಸ್ವಾಮೀಜಿಗಳು, ಲಲಿತಮ್ಮ, ಅಕ್ಕಮಹಾದೇವಿ ಮಾತೆಯರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಖ್ಯಾತ ಗಾಯಕರಾದ ಶ್ರೀ ಸೋನು ನಿಗಮ್ ಇವರ ಭೆಟ್ಟಿ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-09.02.2026ರಂದು ಖ್ಯಾತ ಬಹುಭಾಷಾ ಗಾಯಕರಾದ ಶ್ರೀ ಸೋನು ನಿಗಮ್ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.




  VIEW ALL