Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಕೌದಿಪೂಜೆ
Date:-18.02.2026, ಕೌದಿಪೂಜೆಯೊಂದಿಗೆ ಶಿವರಾತ್ರಿ ಉತ್ಸವ ಸಮಾಪ್ತಿ
ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
Date:-10.02.2026 ಶ್ರೀ ಸಿದ್ಧಾರೂಢಮಠದಲ್ಲಿ ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
Date:-16.02.2026 ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
ಶಿವರಾತ್ರಿ ಅಮವಾಸ್ಯೆ
Date:-17.02.2026, ಶಿವರಾತ್ರಿ ಅಮವಾಸ್ಯೆ
ಮಹಾಶಿವರಾತ್ರಿ – ಜಾಗರಣೆ
Date:-15.02.2026 ಮಹಾಶಿವರಾತ್ರಿ – ಜಾಗರಣೆ

Daily News
3ನೇ ದಿನದ ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ & ಮಹಾತ್ಮರಿಂದ ಪ್ರವಚನ

ಮಧ್ಯರಾತ್ರಿ ಮಲಗಿದವರನ್ನು ಬಡಿದೆಬ್ಬಿಸಿದ ಸಿತಾರ ಫ್ಯೂಸನ್ ಮೋಹಕ ಕಥಕ್ ನೃತ್ಯಕ್ಕೆ ನೋಡುಗರು ದಿಲ್‌ಖುಷ್ ಹುಬ್ಬಳ್ಳಿ: ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಗುರುವಾರ ರಾತ್ರಿ ಪಂಡಿತ ಮೋಹನರಾವ್ ಕಲ್ಯಾಣಪುರ ಕಥಕ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಮೋಹಕ ಕಥಕ್ ನೃತ್ಯವು ನೋಡುಗರಿಗೆ ಬಹಳ ಖುಷಿ ನೀಡಿತು. ಧೀರಜ್ ಗಜಬಿ ನಿರ್ದೇಶನದಲ್ಲಿ ಡಾ.ಅಪೂರ್ವ ಮತ್ತವರ ತಂಡದವರು ಪ್ರದರ್ಶಿಸಿದ ಲಯಬದ್ಧ ನೃತ್ಯವು ತನ್ನ ಹಾವ ಭಾವ ಬಳುಕುಗಳಿಂದ ಸಭಿಕರಲ್ಲಿ ಉತ್ಸಾಹ ತುಂಬಿತಲ್ಲದೇ ತಾಳಕ್ಕೆ ಚಪ್ಪಾಳೆ ತಟ್ಟುವಂತೆ ಮಾಡಿತು. ಮುಂಬೈನ ಪಂಡಿತ ಸೂರ ಶರ್ಮಾ ತಮ್ಮ ಶುದ್ಧ ಸ್ವರದಲ್ಲಿ ರಾಗ ದರ್ಬಾರಿಯಲ್ಲಿ ಶಿವೋಹಂ ಶಿವೋಹಂ, ದುರ್ಗಾದಲ್ಲಿ ಮಾತಾ ಭವಾನಿ ಕೊನೆಗೆ ತರಾನಾ ಮೂಲಕ ಹಾಡುಗಾರಿಕೆಗೆ ಅಜ್ಜ ಪಂಡಿತ ಜಸರಾಜ್‌ರಂತೆ ಆಧ್ಯಾತ್ಮಕ ಟಚ್ ಕೊಟ್ಟರು. ಸರಗಮ್ ಮತ್ತು ತಿಹಾಯಿ ಅಲ್ಲದೇ ತಾನ್‌ಗಳು ಸೂರ್ ಹಾಡುಗಾರಿಕೆಯಲ್ಲಿ ವಿಶಿಷ್ಟವಾಗಿದ್ದವು. ಇನ್ನೇನು ಮಧ್ಯರಾತ್ರಿ ಕಳೆದು ಭಕ್ತರು ನಿದ್ದೆ ಹೋಗುವ ಹಂತದಲ್ಲಿದ್ದಾಗ ಯುವ ಪ್ರತಿಭೆ ನಿಖಿಲ ಜೋಶಿ ಅವರ ಸಿತಾರ ಫ್ಯೂಸ್ ವಾದನ ಇಡೀ ಮಠದ ಆವರಣ ತುಂಬಿ ಮಲಗಿದವರನ್ನು ಎದ್ದು ಕುಳ್ಳಿರಿಸಿತು. ಸಿತಾರ್ ಹಾಡುತ್ತಿದೆಯೇನೋ ಎಂಬAತೆ ಅವರು ನುಡಿಸಿ ಮೆಚ್ಚುಗೆ ಗಳಿಸಿದರು. ರೇಖಾ ಹೆಗಡೆ, ಸದಾಶಿವ ಐಹೊಳೆ, ಸುಜಾತಾ ಗುರವ, ಅನ್ನಪೂರ್ಣ ಭಾಂಡಗೆ, ಶೋಭಾ ಜಾಬಿನ, ಸುರಭಿ ಸುರೇಶ ಭಕ್ತಿಗೀತೆಗಳನ್ನು, ಅಗಡಿಯ ಲಕ್ಷö್ಮವ್ವ ಮಾಗಡಿ ಸಂಗಡಿಗರು ಜಾನಪದ ಗೀತೆ ಹಾಡಿದರು. ಆರೋಹಿ ಐಹೊಳೆ ಕಥಕ್ ನೃತ್ಯ ಪ್ರದರ್ಶಿಸಿದರು. ಮನಸ್ಸಿನ ಪಾಪ ನಿವಾರಣೆಗೆ ಪಂಚಾಕ್ಷರಿ ಮಂತ್ರ ಮದ್ದು ಹುಬ್ಬಳ್ಳಿ: ಶರೀರದಿಂದ ಮತ್ತು ವಾಣಿಯಿಂದ ನಡೆದ ಪಾಪಗಳು ಹೊರಗೆ ಕಾಣುತ್ತವೆ. ಆದರೆ ಮನಸ್ಸಿನಲ್ಲಿಯೆ ಮಾಡಿದ ಪಾಪಗಳು ಕಾಣದೇ ಮನುಷ್ಯನನ್ನು ಕರ್ಮದ ಜಂಜಡಕ್ಕೆ ಸಿಲುಕಿಸುತ್ತವೆ. ಸಿದ್ಧಾರೂಢರು ಉಪದೇಶಿಸಿದ ಓಂ ನಮ: ಶಿವಾಯ ಪಂಚಾಕ್ಷರಿ ಜಪದಿಂದ ಅದನ್ನು ನಿವಾರಣೆ ಮಾಡಬಹುದು ಎಂದು ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಸಿದ್ಧಾರೂಢ ಮಠದ ಕೈಲಾಸ ಮಂಟಪದಲ್ಲಿ ಮುಂಜಾನೆ ಆವಬಲವಿಡಿದಖಳ ದುರಿತವೆನಸಗಿ ಜೀವಿಸುವೆ ಎಂಬ ವಿಷಯ ಕುರಿತು ನಡೆದ ವೇದಾಂತ ಪ್ರವಚನದಲ್ಲಿ ಮಾತನಾಡಿದ ಅವರು ಮಾಡುವುದನ್ನೆಲ್ಲ ಮಾಡಿ ವೇದಾಂತ ಕೇಳಿದರೇನು ಪ್ರಯೋಜನ ಎಂದರು. ಮೂರೂ ಹಂತದ ಪಾಪ ಕಳೆಯಲು ಒಳಗಿನ ಕಣ್ಣು ತೆರೆಯಬೇಕು. ಆಗ ವಿವೇಕ ಉದಯಿಸುವುದು ಇದಕ್ಕೆ ಈಶ್ವರನ ಕೃಪೆ ಗಳಿಸಬೇಕು. ಆಗ ಗುರುಕೃಪೆಯೂ ಆಗಿ ಮಾರ್ಗದರ್ಶನ ಸಿಗುವುದು. ಅಂತಃಕರಣ ಕರಗುವುದು ಎಂದರು. ಬದುಕಿನಲ್ಲಿ ನೀತಿಯುಕ್ತ ನಡವಳಿಕೆ ಅಗತ್ಯ. ಸತ್ಕಾರ್ಯಗಳನ್ನು ಮಾಡುತ್ತಲೇ ಇರಬೇಕು. ಆಗ ಪಾಪವು ಕಳೆದು ಭಗವಂತನ ಅನುಗ್ರಹ ಸಿಗುವುದು ಎಂದು ನಾಗೇಶ್ವರ ಸ್ವಾಮೀಜಿ ಹೇಳಿದರು. ಡಾ.ಶಿವಕುಮಾರ, ವಿದ್ಯಾನಂದ, ಬಸವರಾಜ, ಸಿದ್ಧ ಶಿವಯೋಗಿ, ಬಸವಾನಂದ, ಶಾಂತಾನAದ, ಕುಮಾರ, ಸಿದ್ಧಾನಂದ ಸ್ವಾಮೀಜಿಗಳು, ಲಲಿತಮ್ಮ, ಅಕ್ಕಮಹಾದೇವಿ ಮಾತೆಯರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಖ್ಯಾತ ಗಾಯಕರಾದ ಶ್ರೀ ಸೋನು ನಿಗಮ್ ಇವರ ಭೆಟ್ಟಿ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-09.02.2026ರಂದು ಖ್ಯಾತ ಬಹುಭಾಷಾ ಗಾಯಕರಾದ ಶ್ರೀ ಸೋನು ನಿಗಮ್ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಮಠದಲ್ಲಿ ಆರಂಭವಾಗಿರುವ ಸಂಗೀತ ಕಾರ್ಯಕ್ರಮ & ಮಹಾತ್ಮರಿಂದ ಪ್ರವಚನ.

ಮನಸೆಳೆದ ಮಕ್ಕಳ ಮಲ್ಲಕಂಬ, ಜಾನಪದ ನೃತ್ಯ ಸಿದ್ಧಾರೂಢಮಠದಲ್ಲಿ ಭಕ್ತಿ ಭಾವಗಳ ಸಂಗೀತ ಹುಬ್ಬಳ್ಳಿ : ಶಿವರಾತ್ರಿ ಮತ್ತು ಜಾತ್ರಾಮಹೋತ್ಸವ ಅಂಗವಾಗಿ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಆರಂಭವಾಗಿರುವ ಸಂಗೀತ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಭಕ್ತಿ ಗೀತೆಗಳ ಮಹಾಪೂರವೇ ಹರಿದು, ಸದ್ಭಕ್ತರನ್ನು ಭಾವಾವೇಶದಲ್ಲಿ ತೇಲಿಸಿತಲ್ಲದೇ ಮಧ್ಯರಾತ್ರಿಯ ಚಳಿಯಲ್ಲೂ ಶರ್ಟ್ ಇಲ್ಲದೇ ಮಲ್ಲಕಂಬ ಕಸರತ್ತು ಪ್ರದರ್ಶನ ನೀಡಿದ ಪುಟ್ಟ ಪುಟ್ಟ ಮಕ್ಕಳು ನೋಡುಗರಿಂದ ಸೈ ಎನಿಸಿಕೊಂಡಿತು. ಪ್ರಸಿದ್ಧ ಯುವ ಗಾಯಕಿ ಕುಮಾರಿ ಐಶ್ವರ್ಯ ದೇಸಾಯಿ ತಮ್ಮ ಇಂಪಾದ ಕಂಠದಲ್ಲಿ ತಾನ್ ಮತ್ತು ಸರಿಗಮ್‌ಗಳಿಂದ ಕೂಡಿದ ಮಾತಾ ಭವಾನಿ(ರಾಗ:ದುರ್ಗಾ), ಎರಡು ಭಕ್ತಿ ಗೀತೆ ಕಾಸಿ ಕಮ್ಮಾರನಾದ, ಕೈಲಾಸವಾಸ ಗೌರೀಶ ಹಾಡಿ ಸಭಿಕರ ಮನಗೆದ್ದರು. ದಾವಣಗೆರೆಯ ಕುಮಾರಿ ಗೌರಿ ಜೋಶಿ ಶಂಕರಾ ರಾಗದಲ್ಲಿ ಪ್ರಸ್ತುತಪಡಿಸಿದ ಗಾಯನ ಕೂಡ ಅಷ್ಟೇ ಪರಿಣಾಮಕಾರಿಯಾಗಿತ್ತು. ಭಾಗ್ಯಶ್ರೀ ಹೂಗಾರ ಸಿತಾರ ವಾದನದಲ್ಲಿ ರಾಗ ಚಾರುಕೇಶಿ ನುಡಿಸಿ ಇಡೀ ಮಠದ ಆವರಣವು ಸಿತಾರ ಝೇಂಕಾರನಿಂದ ತುಂಬುವಂತೆ ಮಾಡಿದರು. ವೀಣಾ ಬಡಿಗೇರ, ರಶ್ಮಿ ಕಾಖಂಡಕಿ, ಯುಮುನಾ ಬೆಳಗಲಿ, ಪಂಡಿತ ಕೃಷ್ಣೇಂದ್ರ ವಾಡೀಕರ, ಶೇಷಗಿರಿ ಗುಡಿ, ರಾಮಚಂದ್ರ ಇಬ್ರಾಹಿಂಪುರ ಭಕ್ತಿಗೀತೆಗಳನ್ನು ಹಾಡಿದರು. ಮಕ್ಕಳ ಸಾಹಿತ್ಯ ಅಕಾಡೆಮಿಯ ವಿದ್ಯಾರ್ಥಿನಿಯರು ಸುಗ್ಗಿ ಕುರಿತು ಜಾನಪದ ನೃತ್ಯವನ್ನೂ, ಸಂತೋಷ ಮಲ್ಲಕಂಬ ಅಕಾಡೆಮಿಯ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು. ಸದ್ಗುರುಗಳ ಸತ್ಸಂಗದಿಂದ ಮೋಹ ತ್ಯಾಗ ಹುಬ್ಬಳ್ಳಿ: ಎಲ್ಲವೂ ತನ್ನದು ಎನ್ನುವ ಮನುಷ್ಯ ಜೀವಿ ಮಮಕಾರ ಎಂಬ ಬಂಧನವನ್ನು ಸದ್ಗುರುಗಳ ಸತ್ಸಂಗದಿAದ ಬಿಡಿಸಿಕೊಂಡು ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಬೇಕು ಎಂದು ಇಲ್ಲಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು. ಕೈಲಾಸ ಮಂಟಪದಲ್ಲಿ ಗುರುವಾರ ಮುಂಜಾನೆ ಜರುಗಿದ ವೇದಾಂತ ಉಪನ್ಯಾಸದಲ್ಲಿ ಮಮಕಾರದಿಂ ಮಿಕ್ಕಿನ ಬಂಧನಮುAಟೆ ಎಂಬ ವಿಷಯ ಕುರಿತು ಮಾತನಾಡಿದ ಅವರು ಶರಣರು ಲೋಕ ವಿರೋಧಿಗಳಲ್ಲ, ಪ್ರಪಂಚದಲ್ಲಿದ್ದೂ ಕೂಡ ಅವರು ಮಮಕಾರವನ್ನು ಮನಸ್ಸಿನಿಂದ ಬಿಡಿಸಿಕೊಂಡಿದ್ದರು. ಸಾಮಾನ್ಯ ಜನರು ಅದಕ್ಕೆ ಅಂಟಿಕೊಂಡಿದ್ದರಿಂದ ಮುಕ್ತಿ ಎಂಬುದು ದೂರವಾಯಿತು ಎಂದರು. ಯಾವುದೂ ನನ್ನದಲ್ಲ, ಎಲ್ಲವೂ ಪರಮಾತ್ಮನದೇ ಎಂದು ನಂಬಿ ಬದುಕಿದ ಮಹಾತ್ಮರು ಪರಮಾನುಗ್ರಹ ಪಡೆದರು. ಲೋಕಹಿತಕ್ಕಾಗಿ ಬದುಕಿದರು. ಅವರಿಗೆ ಇಡೀ ಜಗತ್ತೇ ಒಂದು ಕುಟುಂಬ ಎಂದು ತಿಳಿಸಿದರು. ಮನುಷ್ಯ ಎಲ್ಲ ಬಂಧನಗಳಿ0ದ ಬಿಡಿಸಿಕೊಳ್ಳಬಹುದು ಆದರೆ ಮಮಕಾರ ಎಂಬ ಬಂಧನದಿAದ ಮುಕ್ತನಾಗಲಾರ. ಅದಕ್ಕೆ ದೈವ ಕೃಪೆಯೂ, ಗುರುವಿನ ಅನುಗ್ರಹವೂ ಅಗತ್ಯ ಎಂದು ದಾವಣಗೆರೆಯ ಶಾಂತಾನAದ ಸ್ವಾಮೀಜಿ ನುಡಿದರು. ಸದ್ಗುರುಗಳ ಉಪದೇಶ ಮೂಲಕ ಕಿವಿಗೆ ಬಿದ್ದ ಮಾತು ಮನುಷ್ಯ ಜೀವಿಯಲ್ಲಿ ಮಮಕಾರ ಬಂಧನದಿAದ ಬಿಡುಗಡೆ ಹೇಗೆ ಎಂಬುದ ಮಾರ್ಗದರ್ಶನ ಮಾಡುತ್ತದೆ ಎಂದ ಅವರು ಸಿದ್ಧಾರೂಢ ಸ್ವಾಮೀಗಳು ತಮ್ಮ ಜೀವನದುದ್ದಕ್ಕೂ ಇದೇ ಕಾರ್ಯ ಮಾಡಿದರು ಎಂದರು. ಕಕ್ಕೇರಿಯ ರಾಮಾನಂದ ಸ್ವಾಮೀಜಿ, ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ, ಸಚ್ಚಿದಾನಂದ, ಸಿದ್ಧಾನಂದ. ಸಚ್ಚಿದಾನಂದ ಸ್ವಾಮೀಜಿಗಳು, ಶಿವಪುತ್ರ ಅವಧೂತರು, ಶ್ರೀದೇವಿ, ಬಸಮ್ಮ, ಮಹಾದೇವಿ, ವೇದಾಕ್ಷಿ ಮಾತೆಯರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಪದ್ಮಶ್ರೀ ಸನ್ಮಾನ್ಯ ಶ್ರೀ ಪ್ರಭಾಕರ ಕೋರೆ ಇವರ ಭೆಟ್ಟಿ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-27.01.2026 ರಂದು ಪದ್ಮಶ್ರೀ ಪುರಸ್ಕೃತರಾದ ಹಾಗೂ ಕೆ.ಎಲ್.ಇ. ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಪ್ರಭಾಕರ ಕೋರೆ, ಶ್ರೀ ಮಹಾಂತೇಶ ಕಟಗಿಮಠ, ನಿರ್ದೇಶಕರು, ಕೆ.ಎಲ್.ಇ. ಸಂಸ್ಥೆ ಹಾಗೂ ಕೆ.ಎಲ್.ಇ. ಸಂಸ್ಥೆ ಮಾಜಿ ನಿರ್ದೇಶಕರಾದ ಸನ್ಮಾನ್ಯ ಶ್ರೀ ಶಂಕರಣ್ಣ ಮುನವಳ್ಳಿ ಇವರುಗಳು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಡಾ||ಗೋವಿಂದ ಗು. ಮಣ್ಣೂರ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 26.01.2026 ರಂದು 77ನೇ ಗಣರಾಜ್ಯೋತ್ಸವ

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 26.01.2026 ರಂದು 77ನೇ ಗಣರಾಜ್ಯೋತ್ಸವ ದಿನದ ಧ್ವಜಾರೋಹಣವನ್ನು ಟ್ರಸ್ಟ್ ಕಮೀಟಿಯವತಿಯಿಂದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಬೆಳಿಗ್ಗೆ ೮-೩೦ ಘಂಟೆಗೆ ಪೂಜೆಯೊಂದಿಗೆ ನೆರವೇರಿಸಿ ಧ್ವಜಾರೋಹಣವನ್ನು ನೆರವೇರಿಸಿದರು, ಪೂಜ್ಯ ಶ್ರೀ ಭೀಮಾನಂದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರು ಸಾನಿಧ್ಯವನ್ನು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಭಕ್ತರ ಮೇಲ್ಮನೆ ಸಭಾದ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ಬಾಗೇವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ, ಶ್ರೀ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ತುಪ್ಪದ, ಶ್ರೀಮಠದ ಸಾಧುಗಳು, ಸಿಬ್ಬಂದಿವರ್ಗದವರು, ಪಾಠಶಾಲಾ ವಿದ್ಯಾರ್ಥಿಗಳು, ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು

ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ 2026 ನೇ ಸಾಲಿನ ಕ್ಯಾಲೆಂಡರ ಹಾಗೂ ಪಾಕೆಟ ಡೈರಿ ಬಿಡುಗಡೆ ಹಾಗೂ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಶ್ರೀಗಳವರ ಗದ್ದುಗೆ ದರ್ಶನ ಪಡೆಯುವುದರ ಪ್ರತ್ಯೇಕ ದರ್ಶನ ವ್ಯವಸ್ಥೆ ಕ್ಯೂ ಸ್ಟ್ಯಾಂಡ್ ಉದ್ಘಾಟನೆ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ 2026ನೇ ಸಾಲಿನ ಕ್ಯಾಲೆಂಡರ ಮತ್ತು ಪಾಕೆಟ ಡೈರಿಗಳನ್ನು ಬಿಡುಗಡೆಯನ್ನು ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಶಾಂತಾಶ್ರಮ ಹುಬ್ಬಳ್ಳಿ, ಪರಮಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಸಿದ್ಧಾರೂಢಸ್ವಾಮಿ ಮಠ, ಚಳಕಾಪುರ, ಪರಮಪೂಜ್ಯ ಶ್ರೀ ಪರಿಪೂರ್ಣಾನಂದ ಮಹಾಸ್ವಾಮಿಗಳು ಸಿದ್ಧಾರೂಢ ಮಠ ಬೆಳಹೊಡ ಇವರುಗಳು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆಯ ಕ್ಯೂ ಸ್ಟ್ಯಾಂಡ್ ಹಾಗೂ ಭಕ್ತರು ಪ್ರಸಾದ ಸ್ವೀಕರಿಸಲಿಕ್ಕೆ ಸರದಿ ಸಾಲಿನ ಛತ್ತನ್ನು ವಿಸ್ತರಣೆ ಮಾಡಿದ್ದನ್ನು ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ವಹಿಸಿದ್ದರು. ಹಿರಿಯ ನಾಗರಿಕರು ಮತ್ತು ಅಂಗವಿಕಲರು ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ಮಂಜುನಾಥ ಮುನವಳ್ಳಿ, ಶ್ರೀ ಬಸವರಾಜ ಕಲ್ಯಾಣಶೆಟ್ಟರ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-21.12.2025 ರಂದು ಬೆಳಗಾವಿ ಲೋಕ ಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಶ್ರೀ ವಸಂತ ವಾಯ್. ಸಾಲಗಟ್ಟಿ, ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ

ದಿನಾಂಕ:19.12.2025 ರಂದು ಸಂಜೆ 06-15 ಗಂಟೆಗೆ ಶ್ರೀಮಠದ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಬಿ.ಎಸ್. ಭಾರತಿ ಇವರು ಆರತಿ ಮಾಡುವುದರೊಂದಿಗೆ ಉದ್ಘಾಟಿಸಿದರು. ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯಶ್ರೀ ಅಭಿನವ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಇವರು ವಹಿಸಿದ್ದರು. ಸಾನಿಧ್ಯವನ್ನು ಅ.ಬ.ಪ.ಪೂಜ್ಯಶ್ರೀ ಯಶವಂತ ಭುವಾ ಭೋದಲೆ ಮಹಾರಾಜರು ಪಂಡರಪುರ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಸಿ.ಎ. ಶ್ರೀ ಚನ್ನವೀರ ಮುಂಗುರವಾಡಿ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು, ಧರ್ಮದರ್ಶಿಗಳು ಹಾಗೂ ಅಪಾರ ಭಕ್ತವೃಂದ ಉಪಸ್ಥಿತರಿದ್ದರು.




  VIEW ALL