Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಭಾಗವತ ಸಪ್ತಾಹ ಪ್ರಾರಂಭ
Date:-29.10.2025 ಶ್ರೀಮಠದಲ್ಲಿ ಭಾಗವತ ಸಪ್ತಾಹ ಪ್ರಾರಂಭ
ದೇವಿಪುರಾಣ ಮುಕ್ತಾಯ
Date:-02.10.2025 ವಿಜಯದಶಮಿ ಹಾಗೂ ಶ್ರೀಮಠದಲ್ಲಿ ದೇವಿಪುರಾಣ ಮುಕ್ತಾಯ

Daily News
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶೀಗಿ ಹುಣ್ಣಿಮೆ ಆಚರಣೆ .

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-07.10.2025 ರಂದು ಶೀಗಿ ಹುಣ್ಣಿಮೆ ನಿಮಿತ್ಯ ಶ್ರೀಮಠದ ಪುಷ್ಕರಣೆಗೆ ಸುಮಂಗಲೆಯರಿAದ ಪೂಜೆ ಸಲ್ಲಿಸಿ ಶ್ರೀಮಠದ ಹಿಂದಿರುವ ಹೊಲದಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಚರಗ ಚಲ್ಲಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಾಳು ಟಿ. ಮಗಜಿಕೊಂಡಿ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿ ಮಠಕ್ಕೆ ಕೆ.ಜೆ.ಪಿ. ಜ್ಯುವೆಲರ್ ವತಿಯಿಂದ ರೂಮ್ ಕಟ್ಟಡದ ಭೂಮಿ ಪೂಜೆ .

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಒಂದು ಕೊಠಡಿಯನ್ನು ಕಟ್ಟಿಸಲಿಕ್ಕೆ ಕೆ.ಜೆ.ಪಿ. ಜ್ಯೂವೆಲರ್ ಮಾಲಕರಾದ ಸನ್ಮಾನ್ಯ ಡಾ|| ಗಣೇಶ ಶೇಟ್ ಇವರು ದೇಣಿಗೆಯಾಗಿ ಕಟ್ಟಿಸಿಕೊಡುತ್ತೇನೆ ಅಂತ ವಾಗ್ದಾನ ಮಾಡಿದ ಪ್ರಕಾರ ದಿನಾಂಕ:-07.10.2025 ರಂದು ಸದರ ಕೊಠಡಿಯನ್ನು ಕಟ್ಟುವುದರ ಭೂಮಿ ಪೂಜೆಯನ್ನು ತಮ್ಮ ಪರಿವಾರ ಸಮೇತರಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಯುತರನ್ನು ಶ್ರೀಮಠದಿಂದ ಶಾಲು ಹೊದಿಸಿ ಸನ್ಮಾನಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಾಳು ಟಿ. ಮಗಜಿಕೊಂಡಿ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ದೇವಿಪುರಾಣ ಪಠಣೆ ಕಾರ್ಯಕ್ರಮ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದಿನಾಂಕ:-22.09.2025 ರಿಂದ 02.10.2025 ರವರೆಗೆ ಪ್ರತಿ ನಿತ್ಯ ಮಧ್ಯಾಹ್ನ 03-00 ರಿಂದ ಸಾಯಂಕಾಲ 05-00 ಘಂಟೆಯವರೆಗೆ ದೇವಿಪುರಾಣ ಪಠಣೆ ಕಾರ್ಯಕ್ರಮ ನಡೆಯಿತು. ಶ್ರೀ ಗುರುವೀರಭದ್ರ ಸ್ವಾಮಿಗಳು, ಸಿದ್ಧಾಶ್ರಮ, ಕಗದಾಳ ಇವರು ಪುರಾಣ ಪಠಣವನ್ನು ವಿವರಣಾತ್ಮಕವಾಗಿ ನಡೆಸಿದರು, ಶ್ರೀ ಗುರುಶಾಂತಪ್ಪ ಕಾರಿ ಇವರು ಪುರಾಣವನ್ನು ಓದಿದರು, ಶ್ರೀ ಸದಾನಂದ ಬೆಂಡಿಗೇರಿ ಇವರು ಸಂಗೀತ ಸೇವೆ ಹಾಗೂ ಶ್ರೀ ಮೌನೇಶ ಬಡಿಗೇರ ಮತ್ತು ಶ್ರೀ ಮಂಜು ಹುಂಬಿ ಇವರು ತಬಲಾ ಸೇವೆಯನ್ನು ನೆರವೇರಿಸಿದರು. ದಿನಾಂಕ: ೦೨-೧೦-೨೦೨೫ ರಂದು ವಿಜಯದಶಮಿ ಪೂಜೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಸದರ ದೇವಿ ಪುರಾಣ ಕಾರ್ಯಮವನ್ನು ನಡೆಸಿಕೊಟ್ಟ ಸಾಧಕರನ್ನು ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು

ಶ್ರೀ ಮಠದ ದಾಸೋಹದಲ್ಲಿ ಉಪಯೋಗಿಸಲಿಕ್ಕೆ ಸ್ಟೇನ್‌ಲೆಸ್ ಸ್ಟೀಲ್ ದೊಡ್ಡ ಕುಕ್ಕರಗಳು ಹಾಗೂ ಬೇಬಿ ಬಾಯಲರ ದೇಣಿಗೆ.

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಅಡುಗೆ ತಯಾರಿಸಲಿಕ್ಕೆ ಕೆನರಾ ಬ್ಯಾಂಕ್, ಹುಬ್ಬಳ್ಳಿ ಶಾಖೆಯಿಂದ ತಮ್ಮ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ ರೂ. 8,25,000.00 ಗಳ ಮೌಲ್ಯದ ಸ್ಟೇನ್‌ಲೆಸ್ ಸ್ಟೀಲಿನ ಎರಡು ದೊಡ್ಡ ಕುಕ್ಕರಗಳು ಹಾಗೂ ಬೇಬಿ ಬಾಯಲರ್‌ನ್ನು ದೇಣಿಗೆಯಾಗಿ ದಿನಾಂಕ:-01.10.2025 ರಂದು ಶ್ರೀಮಠಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ ವೀರೇಂದ್ರಬಾಬು ಕೆ. ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶ್ರೀ ಸುಚೇಂದ್ರಕುಮಾರ ವಿಮಲ್, ಹಾಗೂ ಡಿವ್ಹಿಜನಲ್ ಮ್ಯಾನೇಜರ್ ಶ್ರೀ ಸಂಜೀವಕುಮಾರ ದೊಮ ಇವರುಗಳಿಗೆ ಶ್ರೀಮಠದಿಂದ ಶಾಲು ಹೊದಿಸಿ ಸನ್ಮಾನಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಡಾ|| ಗೋವಿಂದ ಗು. ಮಣ್ಣೂರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-28.09.2025 ರಂದು ಅಶೋಕ ಹಾಸ್ಪೀಟಲ್ ಹುಬ್ಬಳ್ಳಿ ಇವರ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಹೃದಯ ತಪಾಸಣೆ ಶಿಬಿರವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರ ಅಧ್ಯಕ್ಷತೆಯಲ್ಲಿ ಅಶೋಕ ಹಾಸ್ಪೆಟಲ್‌ನ ನಿರ್ದೇಶಕರಾದ ಶ್ರೀ ಅಶೋಕ ಬಂಗಾರಶೆಟ್ಟರ ಹಾಗೂ ಶ್ರೀಮತಿ ವರ್ಷಾ ಬಂಗಾರಶೆಟ್ಟರ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಮಠದ ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಿ.ಡಿ.ಕಾಮರಡ್ಡಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ಬಾಳು ಟಿ. ಮಗಜಿಕೊಂಡಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ವತಿಯಿಂದ ಪತ್ರಿಕಾ ಮಾಧ್ಯಮದವರಿಗೆ ಗೌರವ ಸಮರ್ಪಣೆ.

ಶ್ರೀಮಠದಲ್ಲಿ ನಡೆಯುವ ಸೇವಾ ಕಾರ್ಯಗಳಲ್ಲಿ ವರ್ಷವಿಡಿ ಸೇವೆ ಸಲ್ಲಿಸಿದ ಪತ್ರಿಕಾ ಪ್ರತಿನಿಧಿಗಳಿಗೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ದಿನಾಂಕ: 28.09.2025 ರಂದು ಮಧ್ಯಾಹ್ನ :- 01-00 ಘಂಟೆಗೆ ಗೌರವ ಸಮರ್ಪಣೆಯನ್ನು ಶ್ರೀಮಠದ ಕೈಲಾಸ ಮಂಟಪದಲ್ಲಿ ನೆರವೇರಿತು. ಪತ್ರಿಕಾ ಪ್ರತಿನಿಧಿಗಳಾದ ಶ್ರೀ ಲೋಚನೇಶ ಹೂಗಾರ, ಶ್ರೀ ವಿರುಪಾಕ್ಷ ಗುದ್ದಯ್ಯನವರ, ಶ್ರೀ ಗಣಪತಿ ಗಂಗೊಳ್ಳಿ, ಶ್ರೀ ಬಿ.ಎನ್.ನಾಗರಾಜ, ಶ್ರೀ ಗಣೇಶ ಬಿಜ್ಜರಗಿ, ಶ್ರೀ ಮಾಲತೇಶ ಹೂಲಿಹಾಳ, ಶ್ರೀ ಗೋವಿಂದರಾಜ ಜವಳಿ, ಶ್ರೀ ಪ್ರಶಾಂತ ಹಿರೇಮಠ, ಶ್ರೀ ಗುರುರಾಜ ಹೂಗಾರ, ಶ್ರೀ ಪ್ರಶಾಂತ ರಾಜಗುರು ಇವರುಗಳು ಗೌರವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಆವರಣದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ದಿನಾಂಕ:-23.09.2025 ರಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಧಾರವಾಡ ಪಶ್ಚಿಮ ಮತ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕರಾದ ಸನ್ಮಾನ್ಯ ಶ್ರೀ ಅರವಿಂದ ಬೆಲ್ಲದ ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರಬಾಬು ಬೆಕ್ಕೇರಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀಮತಿ ಮಾಧವಿಲತಾ, ಬಿ.ಜೆ.ಪಿ. ಕಾರ್ಯಕರ್ತೆ, ಹೈದ್ರಾಬಾದ್ ಇವರ ಬೆಟ್ಟಿ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-19.09.2025 ರಂದು ಶ್ರೀ ತಿಪ್ಪೇಸ್ವಾಮಿ, ಆರ್.ಎಸ್.ಎಸ್.ಮದ್ಯ ಕ್ಷೇತ್ರಿಯಾ ಕಾರ್ಯವಾಹಕ, ಶ್ರೀಮತಿ ಮಾಧವಿಲತಾ, ಬಿ.ಜೆ.ಪಿ. ಕಾರ್ಯಕರ್ತೆ, ಹೈದ್ರಾಬಾದ್, ಡಾ|| ಸಿ.ಎಸ್.ವಿ. ಪ್ರಸಾದ, ಸ್ವರ್ಣ ಸಮೂಹ ಸಂಸ್ಥೆ ನಿರ್ದೇಶಕರು, ಪ್ರೋ|| ವಿರೇಶ ಬಾಳಿಕಾಯಿ, ಎ.ಬಿ.ವಿ.ಪಿ. ಎನ್.ಇ.ಸಿ. ಮೆಂಬರ್, ಶ್ರೀ ತೇಜಸ್ ಗೋಕಾಕ, ಎ.ಬಿ.ವಿ.ಪಿ. ರಾಜ್ಯ ಕಜಾಂಜಿ, ಶ್ರೀ ವೆಂಕಟೇಶ ಡಾಂಗೆ, ಎ.ಬಿ.ವಿ.ಪಿ. ರಾಜ್ಯ ಸಂಘಟನಾ ಕಾರ್ಯದರ್ಶಿ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಸನ್ಮಾನ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




  VIEW ALL