Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಜಲರಥೋತ್ಸವ
Date:-10.08.2025 ಶ್ರೀ ಸಿದ್ಧಾರೂಢಸ್ವಾಮಿಗಳ ಪುಣ್ಯಾರಾಧನೆ, ಜಲರಥೋತ್ಸವ
ಸ್ವಾತಂತ್ರ್ಯ ದಿನಾಚರಣೆ
Date:-15.08.2025 ಸ್ವಾತಂತ್ರ್ಯ ದಿನಾಚರಣೆ
ಶ್ರಾವಣ ಮಾಸದ ಸಪ್ತಾಹ
Date:-04-08-2025 ಶ್ರೀ ಸಿದ್ಧಾರೂಢಸ್ವಾಮಿಗಳ ಶ್ರಾವಣ ಮಾಸದ ಸಪ್ತಾಹ ಆರಂಭ

Daily News
ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಕೆರೆಗೆ ಬಾಗಿನ ಅರ್ಪಣೆ.

ದಿನಾಂಕ:-07.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಕೆರೆಯು ತುಂಬಿದ್ದು ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರ.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಚಲನ ಚಿತ್ರ ನಟರಾದ ಸಿಹಿಕಹಿ ಚಂದ್ರು ಬೆಟ್ಟಿ

ದಿನಾಂಕ:-06.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸ್ಟಾರ್ ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ ಬೋಜನ ಕಾರ್ಯಕ್ರಮವನ್ನು ನಡೆಸಿಕೊಡುವ ಹಾಗೂ ಕನ್ನಡ ಚಲನ ಚಿತ್ರ ನಟರಾದ ಶ್ರೀ ಸಿಹಿಕಹಿ ಚಂದ್ರು ಇವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ದಿನಾಂಕ: 06.08.2025 ಬುಧವಾರ ಪೂಜ್ಯ ಮಹಾತ್ಮರಿಂದ ಪ್ರವಚನ

ದಿನಾಂಕ: 06.08.2025 ಬುಧವಾರ ವಿಷಯ : “ದೊರಕಲೇನದರೊಳು ಪರಿಣತೆದಳೆವುದೆ ಚಂದ” ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ಸುಬ್ರಮಣ್ಯ ಮಹಾಸ್ವಾಮಿಗಳು, ನಿತ್ಯಾನಂದ ಆಶ್ರಮ, ಖುರ್ದಕಂಚನಹಳ್ಳಿ. ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದಸುಕ್ಷೇತ್ರ, ನಯಾನಗರ. ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ತೊಂಡಿಕಟ್ಟಿ. ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಅಭಿನವ ನಾಗಲಿಂಗಸ್ವಾಮಿಗಳು, ನಾಗಲಿಂಗೇಶ್ವರ ಮಠ, ಚಿಕ್ಕುಂಬಿ ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ

ದಿನಾಂಕ: 05.08.2025 ಮಂಗಳವಾರ ಪೂಜ್ಯ ಮಹಾತ್ಮರಿಂದ ಪ್ರವಚನ

ದಿನಾಂಕ: 05.08.2025 ಮಂಗಳವಾರ ವಿಷಯ : “ಬೇಡ ಬೇಡ ಭೋಗದೊಡನಾಟ” ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ನಿಜಗುಣಮಹಾಸ್ವಾಮಿಗಳು, ಬ್ರಹ್ಮವಿದ್ಯಾಶ್ರಮ, ಹಳಕಟ್ಟಿ. ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ರಾಮಾನಂದ ಮಹಾಸ್ವಾಮಿಗಳು, ಸಿದ್ಧಾಶ್ರಮ, ಬಿಷ್ಟಮ್ಮನ ಕಕ್ಕೇರಿ. ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ, ತಿಮ್ಮಾಪೂರ ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಶಿವಬಸವ ಮಹಾಸ್ವಾಮಿಗಳು, ಮತ್ತಿಕಟ್ಟಿ. ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ

ದಿನಾಂಕ: -04.08.2025 ಸೋಮವಾರ ಪೂಜ್ಯ ಮಹಾತ್ಮರಿಂದ ಪ್ರವಚನ

ದಿನಾಂಕ: -04.08.2025 ಸೋಮವಾರ ವಿಷಯ : “ಪರತರ ಮುಕ್ತಿಗುಪಾಯವಿದು ನಿಜಶಿವಮಂತ್ರವಣ್ಣ” ಸಾನಿಧ್ಯ : ಶ್ರೋ.ಬ್ರ.ಸದ್ಗುರು ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ರಾಣಿಬೆನ್ನೂರ. ನೇತೃತ್ವ : ಶ್ರೋ.ಬ್ರ.ಸದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು, ದಾವಣಗೆರೆ. ಅಧ್ಯಕ್ಷತೆ : ಶ್ರೋ.ಬ್ರ.ಸದ್ಗುರು ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಹುಬ್ಬಳ್ಳಿ. ಸಮ್ಮುಖ : ಶ್ರೋ.ಬ್ರ.ಸದ್ಗುರು ಶ್ರೀ ಆರೂಢಭಾರತಿ ವiಹಾಸ್ವಾಮಿಗಳು, ಸಿದ್ಧಾರೂಢ ಮಿಷನ್, ಬೆಂಗಳೂರು. ತತ್ವೋಪದೇಶ : ಉಪಸ್ಥಿತ ಶ್ರೋ.ಬ್ರ.ಸದ್ಗುರುಗಳಿಂದ

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರ ಬೆಟ್ಟಿ.

ದಿನಾಂಕ:-04.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ನಿಂಗಣ್ಣ ಎಸ್. ಬಿರಾದಾರ ಇವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಲೆಕ್ಕ ಪರಿಶೋಧಕರ ಬೆಟ್ಟಿ.

ದಿನಾಂಕ:-25.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಸಿಎ. ಕೆ. ರಘು, ಲೆಕ್ಕ ಪರಿಶೋಧಕರು, ಮಾಜಿ ಅಧ್ಯಕ್ಷರು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ನ್ಯೂ ದೆಹಲಿ, ಸನ್ಮಾನ್ಯ ಶ್ರೀ ಸಿಎ. ಕೋಥಾ ಶ್ರೀನಿವಾಸ, ಲೆಕ್ಕ ಪರಿಶೋಧಕರು, ಮಾಜಿ ಚೇರ್‌ಮನ್ನರು, ಎಸ್.ಐ.ಆರ್.ಸಿ. ಚೆನೈ, ಹಾಗೂ ಲೆಕ್ಕ ಪರಿಶೋಧಕರುಗಳಾದ ಸನ್ಮಾನ್ಯ ಶ್ರೀ ಸಿಎ. ಎನ್.ಎಸ್. ಅಯ್ಯನಗೌಡರ, ಹುಬ್ಬಳ್ಳಿ, ಸನ್ಮಾನ್ಯ ಶ್ರೀ ಸಿಎ. ಭರತ ಬಂಡಾರಿ, ಹುಬ್ಬಳ್ಳಿ ಹಾಗೂ ಸಿಎ. ಎಸ್.ಎನ್. ಮನ್ನಾಪುರ, ಇಳಕಲ್ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ಗೌರವ ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಆದಾಯ ತೆರಿಗೆ ಆಯುಕ್ತರ ಬೆಟ್ಟಿ.

ದಿನಾಂಕ:-18.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಜಿತೇಂದ್ರಕುಮಾರ, ಆಯುಕ್ತರು, ಆದಾಯ ತೆರಿಗೆ ಇಲಾಖೆ, ಬೆಂಗಳೂರು, ಸನ್ಮಾನ್ಯ ಶ್ರೀ ರಾಜಾ ರೆಡ್ಡಿ, ಜಂಟಿ ಆಯುಕ್ತರು, ಹುಬ್ಬಳ್ಳಿ, ಸನ್ಮಾನ್ಯ ಶ್ರೀ ಲಕ್ಕಪ್ಪ ಹನಮನ್ನವರ, ಉಪ ಆಯುಕ್ತರು, ಬೆಂಗಳೂರು, ಸನ್ಮಾನ್ಯ ಶ್ರೀ ಶರಣಕುಮಾರ ಕೋಳೂರು, ಐ.ಟಿ.ಐ.ಹುಬ್ಬಳ್ಳಿ ಹಾಗೂ ಸನ್ಮಾನ್ಯ ಶ್ರೀ ಜೈಪ್ರಕಾಶ, ಐ.ಟಿ.ಐ. ಕಲಬುರ್ಗಿ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಕಲಬುರ್ಗಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಮಹೇಂದ್ರ ಎಚ್. ಸಿಂಘಿ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.




  VIEW ALL