Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಅವರಾತ್ರಿ ಅಮವಾಸ್ಯೆ
Date:-29.01.2025 ಅವರಾತ್ರಿ ಅಮವಾಸ್ಯೆ, ಶಿವರಾತ್ರಿ ಉತ್ಸವದ ಅಂಗವಾಗಿ ಜಡಿಸಿದ್ಧೇಶ್ವರ ಮಠದಿಂದ ಷಡಕ್ಷರಿ ಮಂತ್ರದ ಧ್ವಜವನ್ನು ಶ್ರೀಮಠಕ್ಕೆ ತರಲಾಗುವುದು.
ಶ್ರೀ ಗೋವಿಂದ ಸ್ವಾಮಿಗಳ ಪುಣ್ಯಾರಾಧನೆ
31.01.2025 ಶ್ರೀ ಗೋವಿಂದ ಸ್ವಾಮಿಗಳ ಪುಣ್ಯಾರಾಧನೆ

Daily News
ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ

ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ

ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಆರೂಢ ಜ್ಯೋತಿ ಯಾತ್ರೆಯ ಮೆರವಣಿಗೆ ಕಾರ್ಯಕ್ರಮ...

ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಆರೂಢ ಜ್ಯೋತಿ ಯಾತ್ರೆಯ ಮೆರವಣಿಗೆ ಕಾರ್ಯಕ್ರಮ...

ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ರಥ ಯಾತ್ರೆಯ ಉದ್ಘಾಟನೆ.

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ಯ ಆರೂಢ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಂಡಿದ್ದು ಸದರ ಜ್ಯೋತಿ ಯಾತ್ರೆಯ ಉದ್ಘಾನೆಯನ್ನು ದಿನಾಂಕ:-23.12.2024 ರಂದು ಶ್ರೀ ಸಿದ್ಧಾರೂಢರ ಜನ್ಮ ಸ್ಥಳವಾದ ಬೀದರ ಜಿಲ್ಲೆಯ ಚಳಕಾಪೂರದಲ್ಲಿ ಅತ್ಯಂತ ವೈಭವದಿಂದ ನೆರವೇರಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೋ.ಬ್ರ. ಸದ್ಗುರು ಡಾ|| ಶಿವಕುಮಾರ ಮಹಾಸ್ವಾಮಿಗಳು, ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರ ಹಾಗೂ ಚಳಕಾಪುರ ಇವರು ವಹಿಸಿದ್ದರು, ನೇತೃತ್ವವನ್ನು ಶ್ರೋ.ಬ್ರ. ಸದ್ಗುರು ಶ್ರೀ ಪ್ರಣವಾನಂದ ಮಹಾಸ್ವಾಮಿಗಳು, ಶ್ರೀನಾಗಭೂಷಣ ಶಿವಯೋಗಿ ಮಠ, ಮುಚಳಂಬ ಇವರು ವಹಿಸಿದ್ದರು, ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಕೆ. ನಟರಾಜನ್, ಗೌರವಾನ್ವಿತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರು ನೆರವೇರಿಸಿ ಮಾತನಾಡುತ್ತಾ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಜಾತಿ, ಮತ, ಪಂಥ ಎನ್ನದೇ ಎಲ್ಲರನ್ನೂ ತಮ್ಮವರೆಂದು ಅಪ್ಪಿಕೊಂಡಿದ್ದರು. ಹೀಗಾಗಿ ಅವರು ಸರ್ವಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಅಂತ ನುಡಿದರು. ಅಧ್ಯಕ್ಷತೆಯನ್ನು ಸನ್ಮಾನ್ಯ ರುದ್ರಪ್ಪ ಲಮಾಣಿ, ಉಪಸಭಾಪತಿಗಳು, ಕರ್ನಾಟಕ ವಿಧಾನ ಸಭೆ ಬೆಂಗಳೂರು ಇವರು ಶ್ರೀಮಠದ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಬಿಡುಗಡೆ ಮಾಡಿದರು. ಸಮ್ಮುಖ ಸ್ಥಾನದಲ್ಲಿ ಮಾತೋಶ್ರೀ ಲಕ್ಷ್ಮಿ ತಾಯಿಯವರು, ಸಿದ್ಧಾರೂಢ ಮಠ, ಗುಲ್ಬುರ್ಗಾ, ಪರಮ ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಚಳಕಾಪುರ. ಪರಮ ಪೂಜ್ಯ ಶ್ರೀ ಗಣೇಶಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಬೀದರ, ಪರಮ ಪೂಜ್ಯ ಶ್ರೀ ಪರಮಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಯಳಸಂಗಿ, ಪರಮ ಪೂಜ್ಯ ಶ್ರೀ ಸದ್ರೂಪಾನಂದ ಮಹಾಸ್ವಾಮಿಗಳು, ಮಳಚಾಪೂರ, ಮಾತೋಶ್ರೀ ಅಮೃತಾನಂದಮಯಿ ತಾಯಿಯವರು, ಶ್ರೀ ಸಿದ್ಧಾರೂಢ ಮಠ, ಬೆಳ್ಳೂರ, ಪರಮ ಪೂಜ್ಯ ಶ್ರೀ ನಾಗಯ್ಯ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಬ್ಯಾಲಳ್ಳಿ ಇವರುಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಡಿ.ಆರ್.ಪಾಟೀಲ, ಅಧ್ಯಕ್ಷರು, ಮೇಲ್ಮನೆ ಸಭಾ, ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಅಂದಾನಪ್ಪ ಚ. ಚಾಕಲಬ್ಬಿ, ಶ್ರೀ ವಸಂತ ಯ. ಸಾಲಗಟ್ಟಿ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.

ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ರಥ ಯಾತ್ರೆ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ಯ ಆರೂಢ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಜ್ಯೋತಿ ಯಾತ್ರೆಯು ದಿನಾಂಕ:-23.12.2024 ರಂದು ಶ್ರೀ ಸಿದ್ಧಾರೂಢರ ಜನ್ಮ ಸ್ಥಳವಾದ ಚಳಕಾಪೂರ ಬೀದರ ಜಿಲ್ಲೆಯಿಂದ ಹೊರಟು ಕರ್ನಾಟಕ, ಆಂದ್ರ, ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಹಾಗೂ ವಿವಿಧ ಸ್ಥಳಗಳಲ್ಲಿ ಸಂಚರಿಸಿ ದಿನಾಂಕ:-18.02.2025 ರಂದು ಶ್ರೀ ಸಿದ್ಧಾರೂಢ ಮಠ ಹುಬ್ಬಳ್ಳಿಗೆ ಬಂದು ತಲುಪಲಿದೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸುವ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢರ ತತ್ವಗಳ ಭಜನೆ ಹಾಗೂ ಪ್ರವಚನಗಳ ಮೂಲಕ ಜ್ಞಾನದ ಪ್ರಸಾರ ಮತ್ತು ವಿಶ್ವಶಾಂತಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಾಡುತ್ತಿರುವುದು.

ಲಕ್ಷದೀಪೋತ್ಸವ ಕಾರ್ಯಕ್ರಮ

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಿನಾಂಕ: 01.12.2024 ರಂದು ಸಾಯಂಕಾಲ 6-೦೦ ಘಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮವು ಭಕ್ತರ ಸಹಯೋಗದೊಂದಿಗೆ ಅತೀ ವಿಜೃಂಭಣೆಯಿAದ ಜರುಗಿತು.

2024 ನೇ ವರ್ಷದ ಶ್ರಾವಣ ಜಲರಥೋತ್ಸವ

ಶ್ರಾವಣ ಮಹೋತ್ಸವವು ಶ್ರೀ ಶಾಲಿವಾಹನ ಶಕೆ 1946 ಕ್ರೋಧಿನಾಮ ಸಂವತ್ಸರದ ಶ್ರಾವಣ ಶುದ್ಧ ದಶಮಿ ದಿನಾಂಕ:-14.08.2024 ರಂದು ಪ್ರಾತ:ಕಾಲಕ್ಕೆ ಶ್ರೀ ಸಿದ್ಧಾರೂಢಸ್ವಾಮಿಗಳವರ ಸಮಾಧಿಗೆ ರುದ್ರಾಭಿಷೇಕ ನೆರವೇರಿದ ನಂತರ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಯಿತು. ಪ್ರತಿನಿತ್ಯ ಮುಂಜಾನೆ ಶ್ರೀಮಠದ ಕೈಲಾಸ ಮಂಟಪದಲ್ಲಿ 7-45 ಘಂಟೆಗೆ ಶ್ರೀ ಸಿದ್ಧಾರೂಢಸ್ವಾಮಿಯವರ ಪುರಾಣ ಪಠಣ ಹಾಗೂ 09-30 ಘಂಟೆಗೆ ಪೂಜ್ಯ ಮಹಾತ್ಮರಿಂದ ಶಾಸ್ತ ಪ್ರವಚನ ಮತ್ತು ಸಾಯಂಕಾಲ 5-೦೦ ಘಂಟೆಗೆ ಕೀರ್ತನೆ ನಡೆದು ನಂತರ ಮಹಾಪೂಜೆ ನೆರವೇರಿಸಲಾಯಿತು. ಶ್ರಾವಣ ವದ್ಯ ಪ್ರತಿಪದ ಅಂದರೆ ದಿನಾಂಕ: 20.08.2024, ಮಂಗಳವಾರ ದಿವಸ ಶ್ರೀ ಸಿದ್ಧಾರೂಢ ಸ್ವಾಮಿಯವರ 95 ನೇ ವರ್ಷದ ಪುಣ್ಯತಿಥಿಯ ದಿವಸ ಪಲ್ಲಕ್ಕಿ ಉತ್ಸವವು ವಾದ್ಯ ವೈಭವದೊಂದಿಗೆ ಶಹರದೊಳಗೆ ಹೋಗಿ ಮರಳಿ ಶ್ರೀಮಠಕ್ಕೆ ಬಂದು ಸಾಯಂಕಾಲ: 5-30 ಘಂಟೆಗೆ ಜಲರಥೋತ್ಸವ (ತೆಪ್ಪದ ತೇರು) ಅತ್ಯಂತ ವಿಜೃಂಭಣೆಯಿ0ದ ಜರುಗಿತು, ನಂತರ ಮಹಾಪೂಜೆಯೊಂದಿಗೆ ಉತ್ಸವವು ಸಮಾಪ್ತಿಯಾಯಿತು.

ಶ್ರಾವಣ ಜಲರಥೋತ್ಸವ ಆಮಂತ್ರಣ.

15 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ”ದ ಸಮಾರೋಪ ಸಮಾರಂಭ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ದಿನಾಂಕ: 07.07.2024 ರಿಂದ 02.08.2024 ರವರೆಗೆ ನಡೆದ ಭಗವಚ್ಚಿಂತನ ಸಾಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಆಶೀರ್ವಚನವನ್ನು ನೀಡಿದರು, ಹುಬ್ಬಳ್ಳಿಯ ಶ್ರೀಮಠದಲ್ಲಿ ಸತತವಾಗಿ ಹದಿನಾರು ವರ್ಷಗಳ ಪರಿಯಂತರವಾಗಿ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿಕೊಂಡು ಬಂದಿದ್ದು ಅತ್ಯಂತ ಶ್ಲಾö್ಯಘನೀಯವಾದ ವಿಷಯವಾಗಿದೆ, ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಬೇರೆ ಬೇರೆ ವಿಷಯಗಳ ಚಿಂತನೆ ಮಾಡುವ ಶಿಬಿರಗಳು ಸಾಕಷ್ಟು ನಡೆಯುತ್ತವೆ, ಆದರೆ ಸರ್ವ ಜೀವಿಗಳ ಆತ್ಮ ಸ್ವರೂಪಿಯಾದ ಭಗವಂತನ ಚಿಂತನೆ ನಡೆಯುವುದು ಅತೀ ವಿರಳ, ಇಂತಹದರಲ್ಲಿ ಶ್ರೀಮಠದಿಂದ ಹದಿನಾರು ವರ್ಷಗಳವರೆಗೆ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿ ಶಿಬಿರಾರ್ಥಿಗಳಿಗೆ ವಿಚಾರ ಸಾಗರ, ಪಾರಮಾರ್ಥಗೀತೆ, ಸಿದ್ಧಾರೂಢರ ಚರಿತ್ರೆ ಹಾಗೂ ಶ್ರೀಮನ್ ನಿಜಗುಣ ಸ್ವಾಮಿಗಳ ಶಾಸ್ತç ಮುಂತಾದ ಗ್ರಂಥಗಳನ್ನು ಅಧ್ಯಯನ ಮಾಡಿಕೊಳ್ಳಲಿಕ್ಕೆ ಅನುಕೂಲ ಮಾಡಿಕೊಟ್ಟ ಶ್ರೀಮಠದ ಎಲ್ಲಾ ಧರ್ಮದರ್ಶಿಗಳಿಗೆ ಸಿದ್ಧಾರೂಢರ ಕೃಪಾಶೀರ್ವಾದ ಇರಲೆಂದು ಹೃದಯ ತುಂಬಿ ಹಾರೈಸಿದರು. ನೇತೃತ್ವವನ್ನು ಶ್ರೋ.ಬ್ರ. ಸದ್ಗುರು ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ, ರನ್ನತಿಮ್ಮಾಪೂರ ಹಾಗೂ ಸಮ್ಮುಖ ಸ್ಥಾನವನ್ನು ಶ್ರೋ.ಬ್ರ. ಸದ್ಗುರು ಯೋಗಿರಾಜ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಹಾಗೂ ಮಾತೋಶ್ರೀ ಶಶಿಕಲಾ ಮಾತಾ ಇವರುಗಳು ವಹಿಸಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಠದ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಕಲ್ಯಾಣ ಶೆಟ್ಟರ ಇವರು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಎಲ್ಲ ಪೂಜ್ಯರನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ಸರ್ವವರನ್ನು ವಂದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ರಮೇಶ ಎಸ್. ಬೆಳಗಾವಿ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.




  VIEW ALL